Thursday 1 March 2012

ಡಾ. ಶಿವ ಕುಮಾರ ಸ್ವಾಮೀಜಿಯವರ ದಿನಚರಿ !


ರೈತರು ನಮ್ಮ ಸಮಾಜದ ಬೆನ್ನೆಲುಬು ಅಂತ ಡಾ. ಶಿವ ಕುಮಾರ ಸ್ವಾಮೀಜಿಯವರು ದೃಢವಾಗಿ ನಂಬುತ್ತಾರೆ. ಅವರಿಗೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅದರಲ್ಲಿ ಮಹಾ ಶಿವರಾತ್ರಿಯಂದು ನಡೆಯುವ ಜಾನುವಾರು ಜಾತ್ರೆ ಒಂದು. ಲಕ್ಷಾಂತರ ರೈತರು ಮಠಕ್ಕೆ ತಮ್ಮ ಜಾನುವಾರುಗಳೊಂದಿಗೆ ಆಗಮಿಸುತ್ತಾರೆ. 15 ದಿನಗಳ ಉತ್ಸವದ ಭಾಗವಾಗಿ ಕೈಗಾರಿಕೆ ಮತ್ತು ಕೃಷಿ ಮೇಳ ನಡೆಯುತ್ತದೆ. ಬಸವಣ್ಣನವರ ಸಂದೇಶಗಳನ್ನು ಸಾರುವ ನಾಟಕಗಳು ನಡೆಯುತ್ತವೆ. ಗ್ರಾಮಗಳಲ್ಲಿ ಬಸವ ಜಯಂತಿ ಆಚರಿಸಲಾಗುತ್ತದೆ. ಈ ದಿನಗಳಲ್ಲಿಯೂ ಅವರು ಕನ್ನಡಕ ಧರಿಸುವುದಿಲ್ಲ. ಅವರ ದೃಷ್ಟಿ ಮೊನಚಾಗಿದೆ. ನಡೆಯುವಾಗ ಊರುಗೋಲಿನ ಸಹಾಯ ಮಾತ್ರ ಸಾಕು. ನಿಮ್ಮ ಆರೋಗ್ಯದ ಗುಟ್ಟೇನು ಅಂದರೆ, ಅವರು ಮುಗುಳ್ನಗುತ್ತಾರೆ. ಕಠಿಣ ಪರಿಶ್ರಮ, ಅನುಯಾಯಿಗಳ ಅಕ್ಕರೆ, ಮಿತ ಆಹಾರ ಸೇವನೆ ಎನ್ನುತ್ತಾರೆ. ಸ್ವಾಮೀಜಿಯವರು ಮಿತಾಹಾರ ಸೇವನೆ ಮಾತ್ರವಲ್ಲ, ಅವರ ನಿದ್ದೆ ಕೂಡ ಅತ್ಯಲ್ಪ. ಪ್ರತಿ ದಿನ ಮೂರು ಗಂಟೆ ಮಾತ್ರ ಅವರು ನಿದ್ದೆ ಮಾಡುತ್ತಾರೆ ( ಈ ಲೇಖನ 2007ರಲ್ಲಿ, ಅವರ 99ನೇ ವಯಸ್ಸಿನಲ್ಲಿದ್ದಾಗ ಪ್ರಕಟಿತ) ಸ್ವಾಮೀಜಿಯವರ ದಿನಚರಿ ಇಂತಿದೆ.
- ಬೆಳಗ್ಗೆ 2-3 ಗಂಟೆ : ಅಧ್ಯಯನ
3-3:30 : ಸ್ನಾನ
3:30-5:30 : ಧ್ಯಾನ, ಪೂಜೆ, ಭಜನೆ, ಉಪಾಹಾರ
5:30ರಿಂದ : ವಿದ್ಯಾರ್ಥಿಗಳೊಡನೆ ಪ್ರಾರ್ಥನೆ, ಮಠದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ
ಸಂಜೆ 6-8 ಗಂಟೆ : ವಿದ್ಯಾರ್ಥಿಗಳೊಡನೆ ಸಂಜೆಯ ಪ್ರಾರ್ಥನೆ
ರಾತ್ರಿ 8-11 : ಅಧ್ಯಯನ
ಸ್ವಾಮೀಜಿಯವರು ಸಾಕಷ್ಟು ಪ್ರಯಾಣ ಮಾಡುತ್ತಾರೆ. ಒಂದು ಸಣ್ಣ ಇಡ್ಲಿ, ಸಾಂಬಾರ ರಹಿತ ದಾಲ್, ಹಣ್ಣಿನ ಚೂರು ಮಾತ್ರ ಅವರ ಉಪಾಹಾರ. ಊಟಕ್ಕೆ ಸಣ್ಣ ರಾಗಿ ಮುದ್ದೆ. ಸ್ವಲ್ಪ ಅನ್ನ. ರಾತ್ರಿಯ ಊಟ ಇನ್ನೂ ಸರಳ. ಅವರು ಕಾಫಿ, ಚಹಾ ಅಥವಾ ಹಾಲು ಕುಡಿಯುವುದಿಲ್ಲ. ಬೇವಿನ ಕಷಾಯವನ್ನು ಮಾತ್ರ ಸೇವಿಸುತ್ತಾರೆ. ಬೆಳಗ್ಗೆ ದಿನಪತ್ರಿಕೆಗಳನ್ನು ಓದುವುದನ್ನು ತಪ್ಪಿಸುವುದಿಲ್ಲ. ಜಗತ್ತಿನ ಆಗುಹೋಗುಗಳಿಗೆ ದಿನಾ ಕಿವಿಗೊಡುತ್ತಾರೆ.

ಸ್ವಾಮೀಜಿ ಹುಟ್ಟಿದ ವರ್ಷ : 1908
ಹುಟ್ಟಿದ ಸ್ಥಳ : ವೀರಾಪುರ, ಮಾಗಡಿ ತಾಲ್ಲೂಕು, ಬೆಂಗಳೂರು.
ಹೆತ್ತವರು : ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮ
ವಿದ್ಯಾಭ್ಯಾಸ : ಸರಕಾರಿ ಪ್ರಾಢಶಾಲೆ, ತುಮಕೂರು
ಪದವಿ-ಪೂರ್ವ, ಪದವಿ : ಸೆಂಟ್ರಲ್ ಕಾಲೇಜು, ಬೆಂಗಳೂರು.

No comments:

Post a Comment