Sunday 22 April 2012

1. ಅಭ್ಯಾಸ ಬಲವನ್ನು ಬದಲಾಯಿಸಲು ಕೂಡ ಸತತ ಅಭ್ಯಾಸ ಮಾಡಬೇಕಾಗುತ್ತದೆ. ಇಲ್ಲವಾದರೆ ಹಳೆಯ ಅಭ್ಯಾಸಗಳು ಮುಂದುವರಿಯುತ್ತವೆ. 2.ಅಭ್ಯಾಸ ಬಲದ ಮೂಲಕ ಬದುಕಿನಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಹಾಗೆಯೇ ಏನನ್ನೂ ಮಾಡಿದರಲೂ ಅಭ್ಯಾಸ ಬಲವೇ ಕಾರಣವಾಗುತ್ತದೆ. 3. ಏನಾದರೂ ಸಾಧನೆ ಮಾಡಬೇಕಿದ್ದರೆ ಮಾಡಬೇಕು. ಮಿಕ್ಕಿದ್ದೆಲ್ಲವೂ ಸಮಸ್ಯೆಯಾಗಿಯೇ ಉಳಿಯುವುದಿಲ್ಲ. ಅಂದುಕೊಂಡ ಮೇಲೆ ಮಾಡದಿದ್ದರೆ ಮಾತ್ರ ಸಮಸ್ಯೆ ಅಷ್ಟೇ. 4.ನನಗೆ ಪ್ರಚಾರ ಬೇಡ, ಇವುಗಳಿಂದ ನಾನು ದೂರ ಉಳಿಯುತ್ತೇನೆ. ನನ್ನ ಬಗ್ಗೆ ಏನನ್ನೂ ಬರೆಯಬೇಡಿ, ಹೇಳ ಬೇಡಿ ಎನ್ನುವುದೂ ಒಂದು ವಿಧದ ಆಸೆ. 5.ಸುಖ ಮತ್ತು ದುಃಖದಂತೆ ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಬದುಕಿನಲ್ಲಿ ಯಾವಾಗ ಬೇಕಾದರೂ ಬಂದು ಹೋಗಬಹುದು. ಆದಕಾರಣ ಇವೆರಡನ್ನೂ ಮೀರಿ ಹೋಗಬೇಕು 6.ಯಾವುದೇ ಕ್ಷೇತ್ರದಲ್ಲಿ ಮನಸ್ಸು ಮಾಡಿದರೆ ಸಾಕಷ್ಟು ಹೆಸರು ಗಳಿಸಬಹುದು. ಅದನ್ನು ಮೀರಿಯೂ ಹೋಗಬಹುದು. ಆದರ ಜತೆಗೆ ವಿನಯವಂತಿಕೆ, ಔದಾರ್ಯ ಇದ್ದರೆ ಅದರ ಸೊಗಸೇ ಬೇರೆ. 7.ಮನಸ್ಸನ್ನು ಮನಸ್ಸಿಟ್ಟು ಸ್ವಚ್ಛಗೊಳಿಸಿದರೆ ನಿರ್ಮಲವಾಗಲು, ಶಾಂತವಾಗಲು ಹೆಚ್ಚು ಹೊತ್ತು ಬೇಡ..ಆಗ ಅದುವೇ ಗುರುವಾಗುತ್ತದೆ. ಕೈ ಹಿಡಿದು ಮುನ್ನಡೆಸುತ್ತದೆ. 8.ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು.

Saturday 21 April 2012

ಮನಸ್ಸನ್ನು ಮನಸ್ಸಿಟ್ಟು ಸ್ವಚ್ಛಗೊಳಿಸಿದರೆ ನಿರ್ಮಲವಾಗಲು, ಶಾಂತವಾಗಲು ಹೆಚ್ಚು ಹೊತ್ತು ಬೇಡ..ಆಗ ಅದುವೇ ಗುರುವಾಗುತ್ತದೆ. ಕೈ ಹಿಡಿದು ಮುನ್ನಡೆಸುತ್ತದೆ. ಕಲ್ಪನೆಯ ಅನುಸಾರ ವಾಸ್ತವ ಇಲ್ಲದಿರಲು ಕಾರಣ, ವಾಸ್ತವದ ಅನುಸಾರ ಕಲ್ಪನೆ ಇಲ್ಲದಿರುವುದು ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು. ಮೌನವಾಗಿರುವುದರಿಂದ ದೂರ ಆಗಬಹುದು. ಆದರೆ ಮತ್ತೆ ಹತ್ತಿರವಾಗಲು ಮಾತುಗಳೇ ಬೇಕು..ಆದಕಾರಣ ಎಲ್ಲಿ ಮಾತಾಗಬೇಕು, ಎಲ್ಲಿ ಮೌನವಾಗಬೇಕು ಎಂಬುದು ತಿಳಿದಿರಬೇಕು.. ಬಂಧುಗಳು ಹಣ ಸಹಾಯ ಮಾಡಲು ಮುಂದೆ ಬಂದರೆ ಥ್ಯಾಂಕ್ಸ್ ತಿಳಿಸಿರಿ. ಆದರೆ ಶೀಘ್ರ ಅವರ ಹಣ ವಾಪಸ್ ಮಾಡಲು ಆಗದು ಎಂದಿದ್ದರೆ, ಅವರಿಂದ ಸಾಲ ಪಡೆಯದಿರುವುದೇ ಉತ್ತಮ. ದೊಡ್ಡವರಾಗುತ್ತಿದ್ದಂತೆ ದೊಡ್ಡವರಾಗಬೇಕಾದರೆ ಸಣ್ಣ ತನಗಳನ್ನೆಲ್ಲ ಕೈಬಿಡುತ್ತಾ ಹೋಗಲೇಬೇಕು...ಅಕಸ್ಮಾತ್ ಸಣ್ಣತನಗಳನ್ನು ತ್ಯಜಿಸದಿದ್ದರೆ, ದೊಡ್ಡವರಾದರೂ ಸಣ್ಣತನದ ಮನುಷ್ಯರಂತೆ ವರ್ತನೆಗಳು ಇರುತ್ತವೆ.

Friday 20 April 2012

ವಾಸ್ತವದಲ್ಲಿ ಏನಾದರೂ ಬದಲಾವಣೆ ಆಗಬೇಕಾದರೆ ಮೊದಲು ಕಲ್ಪನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು...

ವಾಸ್ತವದಲ್ಲಿ ಏನಾದರೂ ಬದಲಾವಣೆ ಆಗಬೇಕಾದರೆ ಮೊದಲು ಕಲ್ಪನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು... ಕಲ್ಪನೆಯ ಅನುಸಾರ ವಾಸ್ತವ ಇಲ್ಲದಿರಲು ಕಾರಣ, ವಾಸ್ತವದ ಅನುಸಾರ ಕಲ್ಪನೆ ಇಲ್ಲದಿರುವುದು. ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು. ಮೌನವಾಗಿರುವುದರಿಂದ ದೂರ ಆಗಬಹುದು. ಆದರೆ ಮತ್ತೆ ಹತ್ತಿರವಾಗಲು ಮಾತುಗಳೇ ಬೇಕು..ಆದಕಾರಣ ಎಲ್ಲಿ ಮಾತಾಗಬೇಕು, ಎಲ್ಲಿ ಮೌನವಾಗಬೇಕು ಎಂಬುದು ತಿಳಿದಿರಬೇಕು. ವಾಸ್ತವ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎನ್ನುವುದು ವಾಸ್ತವ.. ದೊಡ್ಡವರಾಗುತ್ತಿದ್ದಂತೆ ದೊಡ್ಡವರಾಗಬೇಕಾದರೆ ಸಣ್ಣ ತನಗಳನ್ನೆಲ್ಲ ಕೈಬಿಡುತ್ತಾ ಹೋಗಲೇಬೇಕು...ಅಕಸ್ಮಾತ್ ಸಣ್ಣತನಗಳನ್ನು ತ್ಯಜಿಸದಿದ್ದರೆ, ದೊಡ್ಡವರಾದರೂ ಸಣ್ಣತನದ ಮನುಷ್ಯರಂತೆ ವರ್ತನೆಗಳು ಇರುತ್ತವೆ. ಧ್ಯಾನ ಮಾಡುವವರು ಕಣ್ಣು ಮುಚ್ಚುತ್ತಾರೆ, ಆದರೆ ಕಣ್ಣು ಮುಚ್ಚುವುದು ಧ್ಯಾನ ಅಲ್ಲ.. ಅಂತರಂಗದಲ್ಲಿ ಏನೆಲ್ಲಾ ಪ್ರತಿಭೆ ಅಡಗಿದೆ ಅಂತ ಅನ್ವೇಷಣೆ ಮಾಡುವುದು ರೋಚಕ ಯಾತ್ರೆ. ಯಾವತ್ತಿಗೋ ಕಳೆದು ಹೋಗಿದ್ದ ಬಾಲ್ಯದ ಮುಗ್ಧತೆ ಕೂಡಾ ಮರಳಿ ಸಿಗಬಹುದು. ಬೇಕಾದಾಗ ಆ ಮುಗ್ಧತೆಯನ್ನು ಅನುಭವಿಸಿ ಬೀಗ ಹಾಕಿಟ್ಟುಕೊಳ್ಳಬಹುದೇನೋ.. ನಮ್ಮ ಉದ್ಯೋಗಗಳಲ್ಲಿ ಒಂದಲ್ಲ, ಹಲವು ಟಾರ್ಗೆಟ್‌ಗಳು ಇರುತ್ತವೆ. ಟಾರ್ಗೆಟ್ ಮರೆತರೆ ಎಡವಿ ಬೀಳುತ್ತೇವೆ. ಟಾರ್ಗೆಟ್ ಇಲ್ಲದೆ ಉದ್ಯೋಗವೇ ಇಲ್ಲ. ಅದು ಬದುಕಿನ ಅವಿಭಾಜ್ಯ ಭಾಗವಾಗಿ ಹೋಗಿ ಬಿಟ್ಟಿದೆ. ಇತರರೊಡನೆ ಕಾಲ ಕಳೆಯುವುದು ತುಂಬ ಸಂತಸ ನೀಡುತ್ತದೆ. ಆದರೆ ನಮ್ಮ ಸಮಯದ ಜತೆಗೆ ಅವರ ಸಮಯ ಕೂಡ ಕಳೆದು ಹೋಗುವುದರಿಂದ ಉಪಯುಕ್ತವಾಗಿ ಕಳೆಯಬೇಕು.. ವಿಶ್ವವನ್ನು ಬಿಟ್ಟಿರಲು ಒಂದು ಕ್ಷಣವೂ ಇರಲು ಅಸಾಧ್ಯವಾದರೂ, ವಿಶ್ವವೇ ನನ್ನ ಹಿಂದೆ ಬರಬೇಕು ಎನ್ನುವುದು ಮೂರ್ಖತನ.. ನಮ್ಮ ನಂಬಿಕೆಗಳನ್ನು ಯಾರಾದರೂ ಒಪ್ಪಿಕೊಂಡರೆ ಅವರೊಡನೆ ಉತ್ತಮ ಬಾಂಧವ್ಯ ಬೆಳೆಯುತ್ತದೆ..ಒಪ್ಪದಿದ್ದರೂ ಬಾಂಧವ್ಯ ಉತ್ತಮವಾಗಿರಬೇಕು. ಅದು ಮನುಷ್ಯತ್ವ.

Tuesday 17 April 2012

ಯಾರಾದರೂ ವೃಥಾ ನಿಮ್ಮನ್ನು ಗೇಲಿ ಮಾಡುತ್ತಿದ್ದರೆ ಅವರಿಗೆ ನಿಮ್ಮ ಬಗ್ಗೆ ಅಸೂಯೆ ಹುಟ್ಟಿದೆ ಎಂದರ್ಥ.

ಬದಲಾವಣೆಗಳು ಇರುತ್ತವೆ. ಆದರೆ ಇಡೀ ಭವಿಷ್ಯದುದ್ದಕ್ಕೂ ಹೇಗಿರಬೇಕು ಎಂದು ಕನಸು ಕಾಣಬೇಕು. ಆವಾಗ ಚಿಂತನೆಗಳೂ ವಿಶಾಲ ವ್ಯಾಪ್ತಿಯನ್ನು ಹೊಂದುತ್ತದೆ. ಮನಸ್ಸೂ ಕ್ಷುಲ್ಲಕ ಕಾರಣಗಳನ್ನು ಲೆಕ್ಕಿಸದೆ ಶಕ್ತಿಯುತವಾಗುತ್ತದೆ.

ಯಾರಾದರೂ ನಿಮ್ಮ ಐಡಿಯಾಗಳನ್ನು ಕೇಳಿ ವೃಥಾ ಗೇಲಿ ಮಾಡಿದರೆ, ಅಲ್ಲೊಂದು ಬೆಳವಣಿಗೆಗೆ ಅವಕಾಶ ಇದೆ ಎಂದರ್ಥ. ಯಾರಾದರೂ ವೃಥಾ ನಿಮ್ಮನ್ನು ಗೇಲಿ ಮಾಡುತ್ತಿದ್ದರೆ ಅವರಿಗೆ ನಿಮ್ಮ ಬಗ್ಗೆ ಅಸೂಯೆ ಹುಟ್ಟಿದೆ ಎಂದರ್ಥ.

ಇದುವರೆಗೆ ಮಾಡದಿರುವ ಕೆಲಸಗಳನ್ನು ಮಾಡುವಾಗ ಮೊದಲು ಎದುರಾಗುವುದು ಕಷ್ಟವೇ. ಆದ್ದರಿಂದ ಅಷ್ಟಕ್ಕೇ ಕೈ ಬಿಡುವುದು ಸೂಕ್ತವಲ್ಲ. ಕಷ್ಟದ ಕೆಲಸಗಳನ್ನು ಸುಲಭವಾಗಿಸಲು ಕಷ್ಟಪಡಬೇಕಾಗುತ್ತದೆ.

ಪ್ರೀತಿ ಮಾಡುವುದು ಹೇಗೆ ಹೇಳದಿದ್ದರೂ ಗೊತ್ತಾಗುತ್ತದೆಯೋ, ಹಾಗೆಯೇ ವ್ಯಂಗ್ಯ, ಅವಮಾನ, ದ್ವೇಷಾಸೂಯೆಗಳೂ ಗೊತ್ತಾಗಿ ಬಿಡುತ್ತದೆ.

ಮೊದಲು ಯಾವ ಕ್ಷೇತ್ರದಲ್ಲಿ ಬೆಳೆಯಬೇಕು ಅಂತ ಅತ್ಯಂತ ಸ್ಪಷ್ಟವಾಗಿ ಗುರಿ ಇಟ್ಟುಕೊಳ್ಳಬೇಕು. ಯಾವ ಕ್ಷೇತ್ರ ಎಂಬುದು ಸ್ಪಷ್ಟವಾದಾಗ ಮಾಡುವ ಎಲ್ಲ ಕೆಲಸಗಳು ಮತ್ತು ಯೋಚನೆಗಳು ಅದಕ್ಕೆ ಪೂರಕವಾಗಿ ಬದಲಾಗುವುದು ಸಹಜ.

ಸಾಧನೆ ಒಂದೆರಡು ದಿನಗಳು ಅಥವಾ ತಿಂಗಳುಗಳಲ್ಲಿ ನಡೆಯುವುದಿಲ್ಲ. ಈ ಸತ್ಯ ಗೊತ್ತಿಲ್ಲದೆ ನಿರಾಸೆಗೀಡಾದರೆ ಅದಕ್ಕೆ ಕಾರಣ ಭ್ರಮೆ.

ಇತರರಲ್ಲಿರುವ ಕೆಟ್ಟ ಅಂಶಗಳನ್ನು ಬೆಟ್ಟದಷ್ಟು ದೊಡ್ಡದು ಮಾಡಿ ಹೇಳುವುದು ಸುಲಭ. ಆದರೆ ಒಳ್ಳೆಯ ಅಂಶಗಳನ್ನು ಹೇಳಲು ಮರೆಯುತ್ತೇವೆ. ಒಬ್ಬ ವ್ಯಕ್ತಿ ಸರಿ ಇಲ್ಲ ಅಂತ ದೂರಿದರೆ, ಆತ ಸರಿ ಹೋದ ಮೇಲೆ ಈಗ ಆತ ಸರಿ ದಾರಿಯಲ್ಲಿದ್ದಾನೆ ಅಂತ ಹೇಳಲು ಮಾತ್ರ ಮರೆಯುತ್ತೇವೆ..

ಯಾರೇ ಆಗಲಿ, ಬಡತನದಿಂದ ಬಳಲಿ ಬೆಂಡಾದರೂ, ತಾನು ನತದೃಷ್ಟ ಅಂತ ಕೊರಗಬಾರದು. ತಾನು ನತದೃಷ್ಟ ಎನ್ನುವುದು ಜೀವದ ಹಿಂದಿರುವ ಚೈತನ್ಯಕ್ಕೆ ತೋರುವ ಅಗೌರವ..

Monday 16 April 2012

ಕಡಲೇಕಾಯಿ ಮಾರುತ್ತಿದ್ದ ಬಾಲಕ, ಹೆಸರಾಂತ ಹೂಡಿಕೆದಾರ, ಲೇಖಕನಾದ ಕಥೆ !



ಜೇಮ್ಸ್ ಬೀಲ್ಯಾಂಡ್ ರೋಜರ್ಸ್..
ಅಮೆರಿಕದ ಖ್ಯಾತ ಹೂಡಿಕೆದಾರ ಮತ್ತು ಲೇಖಕ. ಸದ್ಯಕ್ಕೆ ಅವರು ಸಿಂಗಾಪುರದಲ್ಲಿ ನೆಲಸಿದ್ದಾರೆ. ರೋಜರ್ಸ್ ಹೋಲ್ಡಿಂಗ್ಸ್ ಆಂಡ್ ಬೀಲ್ಯಾಂಡ್ ಇಂಟರೆಸ್ಟ್ ಎಂಬ ಹೂಡಿಕೆ ಕಂಪನಿಯ ಒಡೆಯರಾಗಿದ್ದಾರೆ ರೋಜರ್ಸ್. ರೋಜರ್ಸ್ ಇಂಟರ್‌ನ್ಯಶನಲ್ ಕಮಾಡಿಟೀಸ್ ಇಂಡೆಕ್ಸ್ (ಆರ್‌ಐಸಿ)ಯ ಸೃಷ್ಟಿಕರ್ತ ಕೂಡ ಇವರೇ. ಇಷ್ಟೇ ಆಗಿದ್ದಿದ್ದರೆ ಆಕರ್ಷಕ ಅನ್ನಿಸುತ್ತಿರಲಿಲ್ಲ.

ಆದರೆ ರೋಜರ್ಸ್ ಅವರ ಮುಕ್ತ ಮಾರುಕಟ್ಟೆಯ ಪ್ರಬಲ ಪ್ರತಿಪಾದನೆ, ಯುದ್ಧ ವಿರೋಧಿ ನಿಲುವು, ಅವರು ಕಷ್ಟದಿಂದ ಬೆಳೆದು ಬಂದ ಯಶಸ್ಸಿನ ಹಾದಿ ಇಷ್ಟವಾಗುತ್ತದೆ. ಶೂನ್ಯದಿಂದ ಒಂದೊಂದೇ ಇಟ್ಟಿಗೆಯನ್ನು ಜೋಡಿಸುತ್ತಾ, ಬದುಕನ್ನು ಕಟ್ಟಿಕೊಂಡ ಅವರು, ಲೇಖಕರಾಗಿಯೂ ಹಲವು ಬೆಸ್ಟ್ ಸೆಲ್ಲರ್ ಕೃತಿಗಳನ್ನು ಬರೆದಿದ್ದಾರೆ. ಅವರ ಅರ್ಥಶಾಸ್ತ್ರ ಕುರಿತ ಕೃತಿಗಳಲ್ಲಿ ಕೇವಲ ಅಂಕಿ ಅಂಶಗಳ ಒಣ ಚರ್ಚೆ ಇರುವುದಿಲ್ಲ. ತಮ್ಮದೇ ಆದ ಜೀವನ ಸಿದ್ಧಾಂತವನ್ನು ಸರಳವಾಗಿ ಬೆರೆಸುತ್ತಾರೆ ರೋಜರ್ಸ್. ಜತೆಗೆ ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ನಿರ್ಭೀತರಾಗಿ ಎತ್ತಿ ತೋರಿಸುತ್ತಾರೆ.

ಅಮೆರಿಕದ ಬಾಲ್ಟಿಮೋರ್‌ನಲ್ಲಿ ೧೯೪೨ರಲ್ಲಿ ಜನಿಸಿದ ರೋಜರ್ಸ್, ಐದು ವರ್ಷದ ಬಾಲಕನಾಗಿದ್ದಾಗಲೇ ಬಿಸಿನೆಸ್ ಆರಂಭಿಸಿದ್ದ. ಬಾಲಕ ಎಳೆಯ ಕೈಗಳಲ್ಲಿ ಕಡಲೇ ಕಾಯಿ ಮಾರುತ್ತಿದ್ದ. ಬೇಸ್‌ಬಾಲ್ ಪಂದ್ಯ ನಡೆಯುತ್ತಿದ್ದ ಸ್ಥಳಗಳಲ್ಲಿ ಅಭಿಮಾನಿಗಳು ಬಿಸಾಡುತ್ತಿದ್ದ ಖಾಲಿ ಬಾಟಲುಗಳನ್ನು ಸಂಗ್ರಹಿಸಿ ಮಾರಿ ಸ್ವಲ್ಪ ಕಾಸು ಸಂಪಾದಿಸುತ್ತಿದ್ದ..ಅಂತಹ ಬಾಲಕ ಹೇಗೆ ಬೆಳೆದು ಬಿಟ್ಟ ನೋಡಿ..!


ಜೇಮ್ಸ್ ರೋಜರ್ಸ್ ಅಮೆರಿಕದ ವಾಲ್‌ಸ್ಟ್ರೀಟ್‌ನ ಡೊಮ್ನಿಕ್ ಆಂಡ್ ಡೊಮ್ನಿಕ್ ಹೂಡಿಕೆ ಕಂಪನಿಯಲ್ಲಿ ಮೊದಲ ಕೆಲಸ ಗಳಿಸುತ್ತಾರೆ. ಯಾಲೆ ವಿಶ್ವ ವಿದ್ಯಾಲಯದಲ್ಲಿ ಇತಿಹಾಸದ ಪದವಿ ಪೂರೈಸುತ್ತಾರೆ. ತತ್ತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರದಲ್ಲಿ ಆಕ್ಸ್‌ಫರ್ಡ್ ವಿವಿಯಿಂದ ಮತ್ತೊಂದು ಪದವಿ ಗಳಿಸುತ್ತಾರೆ. 1973ರಲ್ಲಿ ಕ್ವಾಂಟಮ್ ಫಂಡ್ ಎಂಬ ಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸುತ್ತಾರೆ.

1980ರಲ್ಲಿ " ನಿವೃತ್ತಿ’ಯಾಗಲು ಬಯಸುವ ರೋಜರ್ಸ್, ನಂತರ ವಿಶ್ವಾದ್ಯಂತ ಬೈಕೊಂದರಲ್ಲಿ ಪರ್ಯಟನೆ ಮಾಡುತ್ತಾರೆ. ಅಂದಿನಿಂದ ಕೊಲಂಬಿಯಾ ಬಿಸಿನೆಸ್ ಸ್ಕೂಲ್‌ನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾರೆ. 1990-92ರಲ್ಲಿ ಆರು ಖಂಡಗಳಲ್ಲಿ 1 ಲಕ್ಷ ಮೈಲುಗಳ ಉದ್ದಕ್ಕೂ ಬೈಕಿನಲ್ಲಿ ಸಂಚರಿಸುತ್ತಾರೆ. ಇದು ಗಿನ್ನೆಸ್ ಪುಸ್ತಕದಲ್ಲಿ ದಾಖಲೆಯಾಗಿದೆ. 1998ರಲ್ಲಿ ರೋಜರ್ಸ್ ಇಂಟರ್‌ನ್ಯಾಶನಲ್ ಕಮಾಡಿಟಿ ಇಂಡೆಕ್ಸ್ ಅನ್ನು ಸ್ಥಾಪಿಸುತ್ತಾರೆ. 1999ಮತ್ತು 2002ರ ಅವಧಿಯಲ್ಲಿ 116 ರಾಷ್ಟ್ರಗಳಲ್ಲಿ ಪತ್ನಿಯೊಡನೆ ಲೋಕ ಸಂಚಾರ ನಡೆಸಿದರು. 245,000 ಕಿ.ಮೀಗಳ ಈ ಮಹಾ ಯಾನವೂ ಗಿನ್ನೆಸ್ ದಾಖಲೆ ಬರೆಯಿತು.

ಚೀನಾದ ಬೆಳವಣಿಗೆಗಳನ್ನು 1807ರಲ್ಲಿ ಬ್ರಿಟನ್‌ನಲ್ಲಿ ಇದ್ದ ಪರಿಸ್ಥಿತಿಗೆ ಅವರು ಹೋಲಿಸುತ್ತಾರೆ. ವಿಶ್ವ ಶಕ್ತಿಯಾಗಿ ಬ್ರಿಟನ್ ಹೊರಹೊಮ್ಮುವ ಮೊದಲು ಅಲ್ಲಿ ಅನೇಕ ಮಹತ್ತರ ಬದಲಾವಣೆಗಳಾಗಿತ್ತು. 1907ರಲ್ಲಿ ಅಮೆರಿಕದಲ್ಲೂ ಹಾಗೆ ಆಗಿತ್ತು. ಆಗ ಅಕ್ಷರಶಃ ಅಮೆರಿಕ ದಿವಾಳಿಯಾಗಿತ್ತು. ಆದರೂ 20ನೇ ಶತಮಾನದಲ್ಲಿ ಅಭೂತಪೂರ್ವ ಯಶಸ್ಸನ್ನು ಸಂಪಾದಿಸಿತು. 20ನೇ ಶತಮಾನದಲ್ಲಿ ಚೀನಾದಲ್ಲಿ ವಿಪತ್ತುಗಳಾಗಿರಬಹುದು. 21ನೇ ಶತಮಾನದಲ್ಲಿ ಆ ದೇಶದ ಬೆಳವಣಿಗೆ ವಿಶ್ವದ ಇತರ ಭಾಗಗಳನ್ನು ಮೀರಿಸಲಿದೆ. ಹತ್ತೊಂಭತ್ತನೇ ಶತಮಾನದಲ್ಲಿ ಅಮೆರಿಕ 15 ಸಲ ಹಿಂಜರಿತಕ್ಕೀಡಾಗಿತ್ತು. ನಾಗರಿಕ ದಂಗೆಯನ್ನು ಎದುರಿಸಿತ್ತು. ನಂತರ ವಿಶ್ವ ಶಕ್ತಿಯಾಯಿತು. ಚೀನಾದಲ್ಲಿಯೂ ಮೂವತ್ತು ವರ್ಷಗಳ ಹಿಂದೆ ಪರಿಸ್ಥಿತಿ ಭೀಕರವಾಗಿತ್ತು. ಈಗ ಅದನ್ನು ನೋಡಿದರೆ ಮೊಂದೊಂದು ದಿನ ವಿಶ್ವದಲ್ಲಿ ಮುಂಚೂಣಿಗೆ ಬರಲಿದೆ ಎನ್ನಿಸುತ್ತದೆ ಎನ್ನುತ್ತಾರೆ ರೋಜರ್ಸ್.

ಅಮೆರಿಕ ಇರಾಕ್ ವಿರುದ್ಧ ಸಮರ ಸಾರಿದ್ದನ್ನು ರೋಜರ್ಸ್ ಕಟುವಾಗಿ ಟೀಕಿಸಿದ್ದರು. " ನಾವು ಇರಾಕ್ ವಿರುದ್ಧ ಯುದ್ಧ ನಡೆಸಿದರೆ, ಗೆದ್ದರೂ, ಸೋತರೂ ನಮಗೇ ನಷ್ಟ. ಇದರಿಂದಾಗಿ ಹಲವಾರು ರಾಷ್ಟ್ರಗಳಲ್ಲಿ ಅಸ್ಥಿರತೆ ಉಂಟಾಗಲಿದೆ. ಅಮೆರಿಕ ವಿರೋಧಿ ಮೂಲಭೂತವಾದಿ ವಲಯಗಳಲ್ಲಿ ಶತ್ರುತ್ವ ಹೆಚ್ಚಾಗಲಿದೆ. ’ ಎಂದು ಎಚ್ಚರಿಸಿದ್ದರು.

ಅಮೆರಿಕ ಇರಾಕ್ ವಿರುದ್ಧ ಯುದ್ಧ ಘೋಷಿಸಿದಾಗಲೇ, ರೋಜರ್ಸ್ ಇನ್ನು ಅಮೆರಿಕದ ಆರ್ಥಿಕತೆ ಪತನವಾಗುವುದು ಖಚಿತ ಎಂದು ನಂಬಿದ್ದರು. ಅದನ್ನು ನಿರ್ಭಿಡೆಯಿಂದ ಹೇಳಿದ್ದರು ಕೂಡಾ. 2007ರ ಡಿಸೆಂಬರ್‌ನಲ್ಲಿ ನ್ಯೂಯಾರ್ಕ್‌ಗೆ ವಿದಾಯ ಹೇಳಿದ ರೋಜರ್ಸ್, ಸುಮಾರು 16 ದಶಲಕ್ಷ ಡಾಲರ್ ಸಂಪತ್ತಿನೊಡನೆ ಸಿಂಗಾಪುರಕ್ಕೆ ಬಂದು ನೆಲಸಿದರು. ಮುಂದಿನ ಭವಿಷ್ಯ ಏನಿದ್ದರೂ ಏಷ್ಯಾದ ಮಾರುಕಟ್ಟೆಗಳಲ್ಲಿಯೇ ಎಂಬುದು ಅವರ ಖಚಿತ ವಿಶ್ವಾಸ. ಅವರು ಆವತ್ತು ಹೇಳಿದ್ದು ಈವತ್ತು ನಿಜವಾಗಿದೆ. ಅಮೆರಿಕದ ಅರ್ಥ ವ್ಯವಸ್ಥೆ ಈಗ ಸಂಕಷ್ಟದಲ್ಲಿದೆ. ಏಷ್ಯಾ ವೇಗವಾಗಿ ಬೆಳೆಯುತ್ತಿದೆ.

ರೋಜರ್ಸ್ ಹೇಳುತ್ತಾರೆ- 1807ರಲ್ಲಿ ಆಗಿದ್ದರೆ ಲಂಡನ್‌ಗೆ ತೆರಳುವುದು ಜಾಣ ನಡೆಯಾಗಿರುತ್ತಿತ್ತು. 1907ರಲ್ಲಾಗಿದ್ದರೆ ನ್ಯೂಯಾರ್ಕ್ ನಗರಕ್ಕೆ ಮತ್ತು 2007ರಲ್ಲಿ ಏಷ್ಯಾಗೆ ತೆರಳುವುದು ಜಾಣ ನಡೆ. ’ ಏಷ್ಯಾದ ಜನ ಅತ್ಯಂತ ಸ್ಪೂರ್ತಿಯಿಂದ ಮುನ್ನಡೆಯುತ್ತಿದ್ದಾರೆ. ಬೆಳವಣಿಗೆಗೆ ಇಂತಹ ಪರಿಸರದ ಅಗತ್ಯ ಇದೆ. ಹೀಗಾಗಿ ನಾನು ಅಮೆರಿಕವನ್ನು ತೊರೆದೆ ಎನ್ನುತ್ತಾರೆ ರೋಜರ್ಸ್. ಇನ್ನು ರೋಜರ್ಸ್ ಅವರ ಆರ್ಥಿಕ ವಿಚಾರ ಧಾರೆಗಳನ್ನು ನೋಡೋಣ.

- ಯಾವುದೇ ಆಸ್ತಿ ನಿರಂತರ ಹನ್ನೊಂದು ವರ್ಷ ಏರುಗತಿಯಲ್ಲಿ ಇರುವುದು ಚರಿತ್ರೆಯಲ್ಲಿ ಅಪರೂಪ. ಏರಿಳಿತದ ತಿದ್ದುಪಡಿ ಆಗೇ ಆಗುತ್ತದೆ. ಚಿನ್ನ ಕೂಡ ಇದರಿಂದ ಹೊರತಾಗಿಲ್ಲ.

- ಕೃಷಿ ವಿಶ್ವದ ಆರ್ಥಿಕತೆಯಲ್ಲಿ ಮತ್ತೊಮ್ಮೆ ಮಹತ್ತರವಾದ ಪಾತ್ರ ವಹಿಸುತ್ತಿದೆ. ಈಗ ಅಧಿಕ ಬೆಲೆ, ತಂತ್ರಜ್ಞಾನದ ವಿಸ್ತರಣೆಯನ್ನು ಕಾಣುತ್ತಿದೇವೆ. ಕೃಷಿ ಭೂಮಿಯನ್ನು ಖರೀದಿಸಲು ಇನ್ನೂ ಕಡಿಮೆ ಜನ ಮುಂದಾಗುತ್ತಿದ್ದರೂ, ಭರಾಟೆ ಕಂಡು ಬರುವ ದಿನಗಳು ಬಂದೇ ಬರುತ್ತದೆ.

- ಮುಂಬರುವ ದಿನಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಆದಾಯವನ್ನು ಕೃಷಿ ತಂದುಕೊಡಲಿದೆ. ಕೃಷಿಕರಾಗುವುದೇ ಉತ್ತಮ ಎಂದು ಆಗ ಗೊತ್ತಾಗಲಿದೆ.
- ನನಗೆ ಚೀನಾದಲ್ಲಿ ಯಾವುದೇ ನೆಲ ಇಲ್ಲ. ತೋಟ ಇಲ್ಲ. ಆದರೆ ಅಲ್ಲಿ ಕೃಷಿಗೆ ಸಾಕಷ್ಟು ಅವಕಶಗಳು ಇವೆ. ಚೀನಾ ಸರಕಾರ ಕೃಷಿಯ ಅಭಿವೃದ್ಧಿಗೆ ಬೇಕಾದ ಪ್ರತಿಯೊಂದನ್ನೂ ಮಾಡುತ್ತಿದೆ.

( ಮುಂದುವರಿಯುವುದು)

Friday 13 April 2012

ಗೊಂದಲವನ್ನು ಕೂಡ ಅರ್ಥಪೂರ್ಣವಾಗಿಸಬಹುದು. ಕಸದಿಂದ ರಸ ತೆಗೆಯುವಂತೆ.

ಯಂತ್ರ ಮಾನವರಿಗೆ ಯಾವುದೇ ಗೊಂದಲ ಇರುವುದಿಲ್ಲ. ಈಗ ಆಯ್ಕೆ ನಿಮ್ಮದೇ.

ಗೊಂದಲ ಸುದ್ದಿಯಾಗುತ್ತದೆ. ಆದರೆ ಸುದ್ದಿಯಲ್ಲಿ ಗೊಂದಲ ಇದ್ದರೆ ಅದು ಸುದ್ದಿಯಲ್ಲ, ರದ್ದಿ.

ಗೊಂದಲಗಳಿಗೆ ಉತ್ತರವನ್ನು ಹೊರಗೆ ಹುಡುಕುವುದಕ್ಕಿಂತ ಆಂತರಿಕವಾಗಿ ಕಂಡುಕೊಳ್ಳುವುದು ಪರಿಣಾಮಕಾರಿ. ಯಾಕೆಂದರೆ ಗೊಂದಲಗಳು ಹೆಚ್ಚಾಗಿ ಮನಸ್ಸಿಗೆ ಸಂಬಂಧಿಸಿವೆ.

ಗೊಂದಲ ಮತ್ತು ಕಸಿವಿಸಿಗೆ ಬೇಸರಪಡಬೇಕಾಗಿಲ್ಲ. ಸ್ಪಷ್ಟವಾದ ಬೆಳವಣಿಗೆಗೆ ಮುನ್ನ ಇದೆಲ್ಲ ಸಹಜ ಪ್ರಕ್ರಿಯೆ.

ಕ್ರಿಕೆಟ್‌ನಲ್ಲಿ ಗೊಂದಲದ ಪರಿಣಾಮ ರನೌಟ್ ಆಗುತ್ತಾರೆ, ಕ್ಯಾಚ್ ಕೈ ಚೆಲ್ಲುತ್ತಾರೆ. ಜೀವನದಲ್ಲೂ ಅಷ್ಟೇ, ಗೊಂದಲದ ಪರಿಣಾಮ ಏನೇನೋ ಆಗಿ ಹೋಗುತ್ತವೆ. ಆದರೆ ಅಷ್ಟು ಮಾತ್ರಕ್ಕೇ ಎಲ್ಲವೂ ಮುಗಿದು ಹೋಗುವುದಿಲ್ಲ. ಗೊಂದಲ ಒಂದು ಭಾಗ ಮಾತ್ರ.

ಅರ್ಥ ಆಗದಿರುವುದೇ ಗೊಂದಲದ ಮೂಲ. ಅರ್ಥ ಆದ ತಕ್ಷಣ ಆ ಗೊಂದಲ ಇರುವುದಿಲ್ಲ. ಮತ್ತೆ ಗೊಂದಲ ಆಗೋದು ಅರ್ಥವಾಗದ ಮತ್ತೊಂದು ಗೊಂದಲ ಎದುರಾದಾಗ.

ಕ್ರಿಕೆಟ್‌ನಲ್ಲಿ ಗೊಂದಲದ ಪರಿಣಾಮ ರನೌಟ್ ಆಗುತ್ತಾರೆ, ಕ್ಯಾಚ್ ಕೈ ಚೆಲ್ಲುತ್ತಾರೆ. ಜೀವನದಲ್ಲೂ ಅಷ್ಟೇ, ಗೊಂದಲದ ಪರಿಣಾಮ ಏನೇನೋ ಆಗಿ ಹೋಗುತ್ತವೆ. ಆದರೆ ಅಷ್ಟು ಮಾತ್ರಕ್ಕೇ ಎಲ್ಲವೂ ಮುಗಿದು ಹೋಗುವುದಿಲ್ಲ. ಗೊಂದಲ ಒಂದು ಭಾಗ ಮಾತ್ರ.

ಯಾವುದೇ ವಿಚಾರದಲ್ಲಿ ಮನಸ್ಸು ಒಂದೇ ನಿರ್ಧಾರ ತಾಳುವ ತನಕ ಗೊಂದಲ ಮಾಯವಾಗುವುದಿಲ್ಲ. ನಮ್ಮಲ್ಲಿ ಎರಡು ಮನಸ್ಸುಗಳು ಇರುತ್ತವೆ. ಒಂದು ಹಳೆಯ ಮನಸ್ಸು. ಅದು ಹಳೆಯ ಅಭ್ಯಾಸಗಳ ಫಲವಾಗಿ ಸರಪಳಿಯಂತೆ ಬಿಗಿಯಾಗಿರುತ್ತದೆ. ಮತ್ತೊಂದು ಎಚ್ಚರದಲ್ಲಿರುವ ಮನಸ್ಸು. ಇವೆರಡೂ ಒಂದೇ ಆದಾಗ ಗೊಂದಲ ಇರುವುದಿಲ್ಲ. ಇಲ್ಲವಾದಲ್ಲಿ ಗೊಂದಲ ಸಹಜ.

ಎಲ್ಲಿ ಗೊಂದಲ ಇದೆಯೋ ಅಲ್ಲಿ ಸೃಜನಶೀಲತೆ ಇದೆ. ಉದಾಹರಣೆಗೆ ಜಾಹೀರಾತುಗಳು..

ಎಲ್ಲರೂ ಒಂದೇ ಎಂಬ ಭಾವ ಉತ್ಕಟವಾಗಿದ್ದಾಗ ಮನಸ್ಸು ಪ್ರಸನ್ನವಾಗುತ್ತದೆ. ಆಗ ಯಾರಾದರೂ ಜಗಳ ಕಾದರೂ ಕೋಪ ಬರುವುದಿಲ್ಲ, ಅವರಲ್ಲಿಯೂ ನಿಮ್ಮನ್ನೇ ಕಾಣುವುದರಿಂದ ಭೇದ ಕಾಣಲು ಸಾಧ್ಯವಾಗುವುದಿಲ್ಲ. ಭೇದ ಇಲ್ಲದಿದ್ದಾಗ ಜಗಳ ಮುಂದುವರಿಯುವುದಿಲ್ಲ. ವ್ಯತ್ಯಾಸವೆಲ್ಲ ನಗುವಿನಲ್ಲಿ ಅಂತ್ಯವಾಗುತ್ತದೆ.

ಸಾಧನೆಗೆ ಬದುಕೇ ದೊಡ್ಡ ಅವಕಾಶ ಕೊಟ್ಟಿದೆ. ಆದ್ದರಿಂದ ಅವಕಾಶ ಸಿಗುತ್ತಿಲ್ಲ ಎನ್ನುವುದು ಕಾಲ್ಪನಿಕ

ತಾನು ಕೆಲಸಕ್ಕೆ ಬಾರದವನು ’ ಎಂಬ ಭಾವನೆ ಇನ್ನಿಲ್ಲದಂತೆ ಕುಗ್ಗಿಸುತ್ತದೆ. ಆದ್ದರಿಂದ ಆ ಭಾವನೆಯನ್ನು ಕಿತ್ತೊಗೆಯಬೇಕು.


ಎಲ್ಲ ಅಪನಂಬಿಕೆಗಳನ್ನೂ ನಂಬಿಕೆಯಾಗಿ ಪರಿವರ್ತಿಸಿದರೆ ಅತ್ಯಂತ ಉಪಯುಕ್ತ ಶಕ್ತಿಯಾಗುತ್ತದೆ.

ಪ್ರತಿಭೆ ವ್ಯಕ್ತವಾಗಿಲ್ಲ ಎಂದ ಮಾತ್ರಕ್ಕೇ ಇಲ್ಲ ಎಂದಲ್ಲ..ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಪ್ರತಿಭೆ ಇರುತ್ತದೆ. ಅದನ್ನು ಕಸಿಯಲು ಯಾರಿಗೂ ಅಸಾಧ್ಯ. ಆದರೆ ಅದನ್ನು ವ್ಯಕ್ತಪಡಿಸಬೇಕಾದದ್ದು ಅವರವರೇ. ಆದರೆ ಏನಾಗುತ್ತದೆಯೋ ಎಂಬ ಅಪನಂಬಿಕೆಯಿಂದ ವ್ಯಕ್ತಪಡಿಸಲು ಹಿಂಜರಿಯುತ್ತೇವೆ. ಆದಕಾರಣ ಮೊದಲ ಅಪನಂಬಿಕೆಯನ್ನು ಅಳಿಸಿ ಹಾಕಬೇಕು.

ಪ್ರತಿಭೆ ವ್ಯಕ್ತವಾಗಬೇಕಾದರೆ ನಂಬಿಕೆ ಬೇಕು. ನಂಬಿಕೆ ಇಲ್ಲದಿದ್ದಲ್ಲಿ ಪ್ರತಿಭೆ ಅವ್ಯಕ್ತವಾಗಿರುತ್ತದೆ.
ಬಾಳಿನಲ್ಲಿ ಬಂದು ಹೋಗುವ ಬತ್ತದ ದುಃಖ, ಬಡತನ, ನೋವು, ಎಲ್ಲೋ ಚೂರು ಸಂತಸ ಎಲ್ಲವನ್ನೂ ಕಾವ್ಯದಂತೆ ಕಂಡು ಸಾಕ್ಷಿಯಾಗಿ ಇದ್ದು ಬಿಡಬಹುದು.

ಕಾರಣ ಇಲ್ಲದಿದ್ದರೆ ದುಃಖವನ್ನು ಹೇಳಿಕೊಳ್ಳಲಾಗುವುದಿಲ್ಲ..ಅದನ್ನು ಸಹಿಸುವುದು ಬಹಳ ಕಷ್ಟ.

ಬಾಳಿನಲ್ಲಿ ಬಂದು ಹೋಗುವ ಬತ್ತದ ದುಃಖ, ಬಡತನ, ನೋವು, ಎಲ್ಲೋ ಚೂರು ಸಂತಸ ಎಲ್ಲವನ್ನೂ ಕಾವ್ಯದಂತೆ ಕಂಡು ಸಾಕ್ಷಿಯಾಗಿ ಇದ್ದು ಬಿಡಬಹುದು.

ಎಷ್ಟೋ ಸಲ ನಕ್ಕರೂ, ಅದು ನಗುವಾಗಿರುವುದಿಲ್ಲ..


ಎಲ್ಲರೂ ನಮ್ಮ ಹಾಗೆ ಆಲೋಚನೆ ಮಾಡಬೇಕೆಂದು ನಿರೀಕ್ಷಿಸುವುದು ತಪ್ಪು. ಒಂದು ವೇಳೆ ಎಲ್ಲರೂ ನಮ್ಮ ಹಾಗೆ ಆಲೋಚನೆ ಮಾಡಿದರೆ ವೈವಿಧ್ಯತೆ, ಅನ್ವೇಷಣೆ, ಸೃಜನಶೀಲತೆಗೆ ಸ್ಥಳ ಇರುತ್ತಿತ್ತಾ ?

ಮನುಷ್ಯ ಎಂದ ಮೇಲೆ ಪ್ರೀತಿ, ಪ್ರೇಮ, ಕೋಪ, ತಾಪ ಎಲ್ಲ ಇದ್ದದ್ದೇ. ಆದರೆ ಆತನಿಗೆ ಅದನ್ನು ಮೀರಿ ನಿಲ್ಲಲೂ ಸಾಧ್ಯವಿದೆ. ಆತ ಭಾವನೆಗಳ ದಾಸನಾಗಬೇಕೆಂದೇನಿಲ್ಲ.

Sunday 8 April 2012

ಕೆಲಸ ಸಿಕ್ಕಿದ್ದಕ್ಕಾಗಿ ಕೃತಜ್ಞತೆಯ ಭಾವ ಇದ್ದಾಗ ಕೆಲಸ ಉತ್ತಮವಾಗುತ್ತದೆ. ಇಲ್ಲದಿದ್ದಾಗ ಗೊಣಗಾಟ, ಅತೃಪ್ತಿ, ಕಳಪೆ ಫಲಿತಾಂಶ ಖಚಿತ.

ಯಾರ ಮನೆಗೂ ಅಂತಸ್ತು, ಐಶ್ವರ್ಯ, ಕೀರ್ತಿಗಳ ಪ್ರದರ್ಶನಕ್ಕಾಗಿ ಹೋಗಕೂಡದು. ಪ್ರೀತಿ, ವಿಶ್ವಾಸಗಳನ್ನು, ಆತ್ಮೀಯತೆಯನ್ನು ಹಂಚಲು ಹೋಗಬಹುದು.

ಅರಿವನ್ನು ಕಳೆದುಕೊಂಡ ಪ್ರತಿ ಸಂದರ್ಭದಲ್ಲೂ ಅಹಂಕಾರ ಪ್ರತಿಷ್ಠಾಪನೆಯಾಗುತ್ತದೆ. ವಿನಯವಂತರಾದ ಪ್ರತಿ ಕ್ಷಣದಲ್ಲೂ ಅರಿವು ನೆಲೆಯೂರುತ್ತದೆ.

ಯಾವತ್ತಿಗೂ ಅಹಂಕಾರ ಜ್ಞಾನವನ್ನು ಬರ ಮಾಡಿಕೊಳ್ಳುವುದಿಲ್ಲ. ಆದರೆ ವಿನಯ ಬರ ಮಾಡಿಕೊಳ್ಳುತ್ತದೆ.

ಎಷ್ಟೋ ಸಲ ಜ್ಞಾನದ ಜತೆಗೆ ಅಹಂಕಾರವೂ ಪ್ರವೇಶಿಸುತ್ತದೆ. ಅದನ್ನು ಅರಿವಿನ ಸಹಾಯದಿಂದ ಹೊರದಬ್ಬಬೇಕು. ಇಲ್ಲವಾಗಿದ್ದರೆ ಅಹಂಕಾರ ದೊಡ್ಡದಾಗಿ ಬೆಳೆದು, ಜ್ಞಾನದ ಪ್ರವೇಶಕ್ಕೆ ಅಡ್ಡಿಯಾಗುತ್ತದೆ.

ಈಗಿನ ಜ್ಞಾನಕ್ಕೆ ಮತ್ತಷ್ಟು ಜ್ಞಾನ ಕೂಡಿಕೊಳ್ಳುವುದು ಅರಿವಿಗೆ ಬರುತ್ತದೆ. ಆದರೆ ಅದರ ಜತೆಗೆ ಅಹಂಕಾರವನ್ನು ಹತ್ತಿರ ಸುಳಿಯಲೂ ಬಿಡಕೂಡದು. ಆಗ ಮಾತ್ರ ಮತ್ತಷ್ಟು ಜ್ಞಾನ ಸೇರಿಕೊಳ್ಳುತ್ತದೆ. ಇಲ್ಲವಾದಲ್ಲಿ ಬೆಳವಣಿಗೆ ಖತಂ.

ಜ್ಞಾನವನ್ನು ಹಂಚುವುದರಿಂದ ಮತ್ತಷ್ಟು ಜ್ಞಾನ ಅದಕ್ಕೆ ಸೇರ್ಪಡೆಯಾಗುತ್ತದೆ. ಜ್ಞಾನದ ಹೆಸರಿನಲ್ಲಿ ಅಜ್ಞಾನ ಕೂಡ ಸೇರಿಕೊಳ್ಳಬಹುದು. ಆದರೆ ಕೊನೆಯಲ್ಲಿ ಉಳಿಯುವುದು ಜ್ಞಾನ ಮಾತ್ರ.

ಜ್ಞಾನ ಯಾರೊಬ್ಬರ ಸ್ವತ್ತಲ್ಲ. ಜ್ಞಾನವನ್ನು ಹಂಚುವುದರಿಂದ ಅದು ನಷ್ಟವಾಗುವುದಿಲ್ಲ. ಮತ್ತೂ ಹೆಚ್ಚುತ್ತದೆ ಎಂಬ ಹಿರಿಯರ ಮಾತು ನೂರಕ್ಕೆ ನೂರು ಸತ್ಯ. ಹಂಚಿದ್ದು ಜ್ಞಾನವಾಗಿದ್ದರೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೆ ಇಲ್ಲ..

ಸ್ನೇಹಿತರೇ,
ನನಗೆ ಎಷ್ಟೋ ಸಲ ಒಂದು ಪ್ರಶ್ನೆ ಪದೇ ಪದೇ ಕಾಡುತ್ತಿರುತ್ತದೆ. ಈ ಜೀವನದ ಗುರಿ ಏನು ? ಕಟ್ಟಕಡೆಗೆ ನನಗೆ ಹೊಳೆಯುವುದು ಸಚ್ಚಾರಿತ್ರ್ಯ. ದುಡ್ಡು ಅಥವಾ ಕೀರ್ತಿ ಕೊಡಲಾಗದ ತೃಪ್ತಿಯನ್ನು ಉತ್ತಮ ಗುಣ ಅಥವಾ ಸಚ್ಚಾರಿತ್ರ್ಯ ನೀಡುತ್ತದೆ. ಸಚ್ಚಾರಿತ್ರ್ಯ ನೀಡುವ ಶಕ್ತಿ ಅತ್ಯುನ್ನತ ಮಟ್ಟದ್ದು, ಅದಕ್ಕೆ ದಣಿವೇ ಇರುವುದಿಲ್ಲ. ಅಲ್ವಾ...

ಕೆಲಸ ಸಿಕ್ಕಿದ್ದಕ್ಕಾಗಿ ಕೃತಜ್ಞತೆಯ ಭಾವ ಇದ್ದಾಗ ಕೆಲಸ ಉತ್ತಮವಾಗುತ್ತದೆ. ಇಲ್ಲದಿದ್ದಾಗ ಗೊಣಗಾಟ, ಅತೃಪ್ತಿ, ಕಳಪೆ ಫಲಿತಾಂಶ ಖಚಿತ.

ಸೋಲಿನಿಂದ ಪಾಠ ಕಲಿತರೆ, ಕಲಿತದ್ದನ್ನು ಅನುಷ್ಠಾನಗೊಳಿಸಿದರೆ ಜೀವನದಲ್ಲಿ ಸೋಲು ಸೋಲೇ ಆಗಿ ಇರುವುದಿಲ್ಲ.

Friday 6 April 2012

ಬಯಸದೆಯೇ ಯಾರೂ ಒಳ್ಳೆಯರಾಗುವುದಿಲ್ಲ ಅಥವಾ ದುಷ್ಟರಾಗುವುದಿಲ್ಲ

ಸಾಮಾನ್ಯವಾಗಿ ಒಂದು ಅವಕಾಶ ತಪ್ಪಿದೊಡನೆಯೇ ಮತ್ತೊಂದು ಅವಕಾಶ ಕಾದಿರುತ್ತದೆ. ಆದರೆ ಅವಕಾಶ ಕೈತಪ್ಪಿದ ದುಃಖದಲ್ಲಿ ಅದು ಕಾಣಿಸುವುದಿಲ್ಲ.

ಅವಕಾಶಗಳು ಸಿಗದಿರುವುದು ಕೂಡ ಒಂದು ಅವಕಾಶವೇ. ಆದ್ದರಿಂದ ಅವಕಾಶ ಸಿಕ್ಕಿಲ್ಲ ಎನ್ನುವುದು ಒಂದು ಕಲ್ಪನೆಯಷ್ಟೇ. ವಾಸ್ತವವಲ್ಲ..

ಯಾರು ಅವಮಾನಿಸುತ್ತಾರೆಯೋ, ಅವರ ಬಳಿ ಜಗಳಕ್ಕೆ ಇಳಿಯಕೂಡದು. ಆದರೆ ಅವರನ್ನು ಎಂದಿಗೂ ಮರೆಯಕೂಡದು. ಅವರು ನೋಡುತ್ತಿರುವಂತೆಯೇ ಬೆಳೆಯುತ್ತಾ ಹೋಗಬೇಕು. ಇಡೀ ಬದುಕು ಉತ್ತರ ಆಗಬೇಕು. ಮಾತಲ್ಲ.

ಬ್ಯಾಂಕ್‌ಗಳು ಬಡವರಿಗೆ ಸಾಲವಾಗಿ ದುಡ್ಡು ಕೊಡುವುದಿಲ್ಲ. ಆದರೆ ಠೇವಣಿ ಇಡುವ ಶ್ರೀಮಂತರಿಗೆ ಬಡ್ಡಿ ಕೊಡುತ್ತವೆ. ಹೀಗಾಗಿ ಈವತ್ತು ಬ್ಯಾಂಕ್‌ಗಳೆಂದರೆ ದುಡ್ಡಿದ್ದವರಿಗೇ ದುಡ್ಡು ಕೊಡುವ ಹಣಕಾಸು ಸಂಸ್ಥೆಗಳಾಗಿವೆ.

ಬಡತನದಿಂದ ಆತ್ಮವಿಶ್ವಾಸದೆ ನಲುಗುತ್ತದೆ. ಆದರೆ ಬಡತನದಿಂದ ಮೇಲೆ ಬರಬೇಕಾದರೆ ಆತ್ಮವಿಶ್ವಾಸ ಅತ್ಯಂತ ಅಗತ್ಯ.

ಎಲ್ಲೋ ದೂರದಲ್ಲಿರುವ ಅವಕಾಶಗಳ ಬಗ್ಗೆ ಚಿಂತಿಸುತ್ತಾ ಕಾಲ ಹರಣ ಮಾಡುವುದರ ಬದಲಿಗೆ, ಹತ್ತಿರದ ಅವಕಾಶಗಳನ್ನು ಬಳಸಿಕೊಂಡು ಪೂರ್ಣಗೊಳಿಸಬೇಕು. ಆಗ ಮಗದೊಂದು ಅವಕಾಶ ತಾನಾಗಿಯೇ ಸೃಷ್ಟಿಯಾಗುತ್ತದೆ. ಹೊರತಾಗಿ ನನಗೆ ಅವಕಾಶ ಸಿಗುತ್ತಿಲ್ಲ ಎಂದು ಕೊರಗುವುದರಿಂದ, ಕೈಯಲ್ಲಿರುವ ಅವಕಾಶಗಳೂ ತಪ್ಪಿ ಹೋಗುತ್ತವೆ.

ಬಯಸದೆಯೇ ಯಾರೂ ಒಳ್ಳೆಯರಾಗುವುದಿಲ್ಲ ಅಥವಾ ದುಷ್ಟರಾಗುವುದಿಲ್ಲ

ಕಾಯಬೇಕು..ಶತ ಶತಮಾನಗಳ ತನಕ ಬೇಕಾದರೂ ಕಾಯುವೆ ಎನ್ನುವಷ್ಟು ದೊಡ್ಡ ತಾಳ್ಮೆ ಇರಬೇಕು. ಅಂದರೆ ಅಕ್ಷರಶಃ ನೂರು ವರ್ಷ ಕಾಯೋದು ಅಂತ ಅಲ್ಲ. ಅಂತಹ ಪರ್ವತೋಪಮ ತಾಳ್ಮೆ ಇಲ್ಲದಿದ್ದರೆ ಆರಂಭಿಕ ಅಡೆತಡೆಗಳಿಂದ ಬಲು ಬೇಗ ಹತಾಶರಾಗುವ ಸಾಧ್ಯತೆ ಇರುತ್ತದೆ. ಆದರೆ ಅಂತಹ ತಾಳ್ಮೆ ಇರುವ ವ್ಯಕ್ತಿ ಬದುಕಿನಲ್ಲಿ ಉನ್ನತ ಗುರಿಗಳನ್ನು ಸಾಧಿಸುವುದು ಶತಃಸಿದ್ಧ..

ಕಷ್ಟಕಾಲದಲ್ಲಿದ್ದಾಗ ಸ್ನೇಹಿತರು ಸಹಾಯಕ್ಕೆ ಬರುತ್ತಿಲ್ಲವೇ ? ಅವರ ವಿರುದ್ಧ ಕೋಪಿಸಿಕೊಳ್ಳದಿರಿ. ಎಲ್ಲ ಕಾಲದಲ್ಲೂ ನಿಮ್ಮ ಪರಮಾಪ್ತ ಮಿತ್ರರೆಂದರೆ ನೀವೇ.

ಸುತ್ತಮುತ್ತ ಜನ ಇದ್ದಾಗ ಹೇಗಿರುತ್ತೀರಿ ಎಂಬುದಕ್ಕಿಂತಲೂ, ಒಬ್ಬರೇ ಇದ್ದಾಗ ಹೇಗೆ ವರ್ತಿಸುತ್ತೀರಿ ? ಏನು ಯೋಚಿಸುತ್ತೀರಿ ಎಂಬುದು ಸ್ವಲ್ಪ ಹೆಚ್ಚೇ ಪ್ರಾಮುಖ್ಯತೆ ಪಡೆಯುತ್ತದೆ. ಅದುವೇ ನಿಜವಾದ ನೀವು.