Friday 20 April 2012

ವಾಸ್ತವದಲ್ಲಿ ಏನಾದರೂ ಬದಲಾವಣೆ ಆಗಬೇಕಾದರೆ ಮೊದಲು ಕಲ್ಪನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು...

ವಾಸ್ತವದಲ್ಲಿ ಏನಾದರೂ ಬದಲಾವಣೆ ಆಗಬೇಕಾದರೆ ಮೊದಲು ಕಲ್ಪನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು... ಕಲ್ಪನೆಯ ಅನುಸಾರ ವಾಸ್ತವ ಇಲ್ಲದಿರಲು ಕಾರಣ, ವಾಸ್ತವದ ಅನುಸಾರ ಕಲ್ಪನೆ ಇಲ್ಲದಿರುವುದು. ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು. ಮೌನವಾಗಿರುವುದರಿಂದ ದೂರ ಆಗಬಹುದು. ಆದರೆ ಮತ್ತೆ ಹತ್ತಿರವಾಗಲು ಮಾತುಗಳೇ ಬೇಕು..ಆದಕಾರಣ ಎಲ್ಲಿ ಮಾತಾಗಬೇಕು, ಎಲ್ಲಿ ಮೌನವಾಗಬೇಕು ಎಂಬುದು ತಿಳಿದಿರಬೇಕು. ವಾಸ್ತವ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎನ್ನುವುದು ವಾಸ್ತವ.. ದೊಡ್ಡವರಾಗುತ್ತಿದ್ದಂತೆ ದೊಡ್ಡವರಾಗಬೇಕಾದರೆ ಸಣ್ಣ ತನಗಳನ್ನೆಲ್ಲ ಕೈಬಿಡುತ್ತಾ ಹೋಗಲೇಬೇಕು...ಅಕಸ್ಮಾತ್ ಸಣ್ಣತನಗಳನ್ನು ತ್ಯಜಿಸದಿದ್ದರೆ, ದೊಡ್ಡವರಾದರೂ ಸಣ್ಣತನದ ಮನುಷ್ಯರಂತೆ ವರ್ತನೆಗಳು ಇರುತ್ತವೆ. ಧ್ಯಾನ ಮಾಡುವವರು ಕಣ್ಣು ಮುಚ್ಚುತ್ತಾರೆ, ಆದರೆ ಕಣ್ಣು ಮುಚ್ಚುವುದು ಧ್ಯಾನ ಅಲ್ಲ.. ಅಂತರಂಗದಲ್ಲಿ ಏನೆಲ್ಲಾ ಪ್ರತಿಭೆ ಅಡಗಿದೆ ಅಂತ ಅನ್ವೇಷಣೆ ಮಾಡುವುದು ರೋಚಕ ಯಾತ್ರೆ. ಯಾವತ್ತಿಗೋ ಕಳೆದು ಹೋಗಿದ್ದ ಬಾಲ್ಯದ ಮುಗ್ಧತೆ ಕೂಡಾ ಮರಳಿ ಸಿಗಬಹುದು. ಬೇಕಾದಾಗ ಆ ಮುಗ್ಧತೆಯನ್ನು ಅನುಭವಿಸಿ ಬೀಗ ಹಾಕಿಟ್ಟುಕೊಳ್ಳಬಹುದೇನೋ.. ನಮ್ಮ ಉದ್ಯೋಗಗಳಲ್ಲಿ ಒಂದಲ್ಲ, ಹಲವು ಟಾರ್ಗೆಟ್‌ಗಳು ಇರುತ್ತವೆ. ಟಾರ್ಗೆಟ್ ಮರೆತರೆ ಎಡವಿ ಬೀಳುತ್ತೇವೆ. ಟಾರ್ಗೆಟ್ ಇಲ್ಲದೆ ಉದ್ಯೋಗವೇ ಇಲ್ಲ. ಅದು ಬದುಕಿನ ಅವಿಭಾಜ್ಯ ಭಾಗವಾಗಿ ಹೋಗಿ ಬಿಟ್ಟಿದೆ. ಇತರರೊಡನೆ ಕಾಲ ಕಳೆಯುವುದು ತುಂಬ ಸಂತಸ ನೀಡುತ್ತದೆ. ಆದರೆ ನಮ್ಮ ಸಮಯದ ಜತೆಗೆ ಅವರ ಸಮಯ ಕೂಡ ಕಳೆದು ಹೋಗುವುದರಿಂದ ಉಪಯುಕ್ತವಾಗಿ ಕಳೆಯಬೇಕು.. ವಿಶ್ವವನ್ನು ಬಿಟ್ಟಿರಲು ಒಂದು ಕ್ಷಣವೂ ಇರಲು ಅಸಾಧ್ಯವಾದರೂ, ವಿಶ್ವವೇ ನನ್ನ ಹಿಂದೆ ಬರಬೇಕು ಎನ್ನುವುದು ಮೂರ್ಖತನ.. ನಮ್ಮ ನಂಬಿಕೆಗಳನ್ನು ಯಾರಾದರೂ ಒಪ್ಪಿಕೊಂಡರೆ ಅವರೊಡನೆ ಉತ್ತಮ ಬಾಂಧವ್ಯ ಬೆಳೆಯುತ್ತದೆ..ಒಪ್ಪದಿದ್ದರೂ ಬಾಂಧವ್ಯ ಉತ್ತಮವಾಗಿರಬೇಕು. ಅದು ಮನುಷ್ಯತ್ವ.

1 comment:

  1. ನಿಮ್ಮ ಬ್ಲಾಗ್ ನನಗೆ ವ್ಯಕ್ತಿ ವಿಕಸನದ ಅಂಚೆ ತೆರಪಿನ ಶಿಕ್ಷಣ.

    ಮನುಷ್ಯತ್ವದ ಬಗ್ಗೆ ಸರಳ ವ್ಯಾಖ್ಯಾನ ಇಷ್ಟವಾಯಿತು ಸಾರ್.

    ನನ್ನ ಬ್ಲಾಗಿಗೂ ಬನ್ನಿರಿ.

    ReplyDelete