Tuesday 17 April 2012

ಯಾರಾದರೂ ವೃಥಾ ನಿಮ್ಮನ್ನು ಗೇಲಿ ಮಾಡುತ್ತಿದ್ದರೆ ಅವರಿಗೆ ನಿಮ್ಮ ಬಗ್ಗೆ ಅಸೂಯೆ ಹುಟ್ಟಿದೆ ಎಂದರ್ಥ.

ಬದಲಾವಣೆಗಳು ಇರುತ್ತವೆ. ಆದರೆ ಇಡೀ ಭವಿಷ್ಯದುದ್ದಕ್ಕೂ ಹೇಗಿರಬೇಕು ಎಂದು ಕನಸು ಕಾಣಬೇಕು. ಆವಾಗ ಚಿಂತನೆಗಳೂ ವಿಶಾಲ ವ್ಯಾಪ್ತಿಯನ್ನು ಹೊಂದುತ್ತದೆ. ಮನಸ್ಸೂ ಕ್ಷುಲ್ಲಕ ಕಾರಣಗಳನ್ನು ಲೆಕ್ಕಿಸದೆ ಶಕ್ತಿಯುತವಾಗುತ್ತದೆ.

ಯಾರಾದರೂ ನಿಮ್ಮ ಐಡಿಯಾಗಳನ್ನು ಕೇಳಿ ವೃಥಾ ಗೇಲಿ ಮಾಡಿದರೆ, ಅಲ್ಲೊಂದು ಬೆಳವಣಿಗೆಗೆ ಅವಕಾಶ ಇದೆ ಎಂದರ್ಥ. ಯಾರಾದರೂ ವೃಥಾ ನಿಮ್ಮನ್ನು ಗೇಲಿ ಮಾಡುತ್ತಿದ್ದರೆ ಅವರಿಗೆ ನಿಮ್ಮ ಬಗ್ಗೆ ಅಸೂಯೆ ಹುಟ್ಟಿದೆ ಎಂದರ್ಥ.

ಇದುವರೆಗೆ ಮಾಡದಿರುವ ಕೆಲಸಗಳನ್ನು ಮಾಡುವಾಗ ಮೊದಲು ಎದುರಾಗುವುದು ಕಷ್ಟವೇ. ಆದ್ದರಿಂದ ಅಷ್ಟಕ್ಕೇ ಕೈ ಬಿಡುವುದು ಸೂಕ್ತವಲ್ಲ. ಕಷ್ಟದ ಕೆಲಸಗಳನ್ನು ಸುಲಭವಾಗಿಸಲು ಕಷ್ಟಪಡಬೇಕಾಗುತ್ತದೆ.

ಪ್ರೀತಿ ಮಾಡುವುದು ಹೇಗೆ ಹೇಳದಿದ್ದರೂ ಗೊತ್ತಾಗುತ್ತದೆಯೋ, ಹಾಗೆಯೇ ವ್ಯಂಗ್ಯ, ಅವಮಾನ, ದ್ವೇಷಾಸೂಯೆಗಳೂ ಗೊತ್ತಾಗಿ ಬಿಡುತ್ತದೆ.

ಮೊದಲು ಯಾವ ಕ್ಷೇತ್ರದಲ್ಲಿ ಬೆಳೆಯಬೇಕು ಅಂತ ಅತ್ಯಂತ ಸ್ಪಷ್ಟವಾಗಿ ಗುರಿ ಇಟ್ಟುಕೊಳ್ಳಬೇಕು. ಯಾವ ಕ್ಷೇತ್ರ ಎಂಬುದು ಸ್ಪಷ್ಟವಾದಾಗ ಮಾಡುವ ಎಲ್ಲ ಕೆಲಸಗಳು ಮತ್ತು ಯೋಚನೆಗಳು ಅದಕ್ಕೆ ಪೂರಕವಾಗಿ ಬದಲಾಗುವುದು ಸಹಜ.

ಸಾಧನೆ ಒಂದೆರಡು ದಿನಗಳು ಅಥವಾ ತಿಂಗಳುಗಳಲ್ಲಿ ನಡೆಯುವುದಿಲ್ಲ. ಈ ಸತ್ಯ ಗೊತ್ತಿಲ್ಲದೆ ನಿರಾಸೆಗೀಡಾದರೆ ಅದಕ್ಕೆ ಕಾರಣ ಭ್ರಮೆ.

ಇತರರಲ್ಲಿರುವ ಕೆಟ್ಟ ಅಂಶಗಳನ್ನು ಬೆಟ್ಟದಷ್ಟು ದೊಡ್ಡದು ಮಾಡಿ ಹೇಳುವುದು ಸುಲಭ. ಆದರೆ ಒಳ್ಳೆಯ ಅಂಶಗಳನ್ನು ಹೇಳಲು ಮರೆಯುತ್ತೇವೆ. ಒಬ್ಬ ವ್ಯಕ್ತಿ ಸರಿ ಇಲ್ಲ ಅಂತ ದೂರಿದರೆ, ಆತ ಸರಿ ಹೋದ ಮೇಲೆ ಈಗ ಆತ ಸರಿ ದಾರಿಯಲ್ಲಿದ್ದಾನೆ ಅಂತ ಹೇಳಲು ಮಾತ್ರ ಮರೆಯುತ್ತೇವೆ..

ಯಾರೇ ಆಗಲಿ, ಬಡತನದಿಂದ ಬಳಲಿ ಬೆಂಡಾದರೂ, ತಾನು ನತದೃಷ್ಟ ಅಂತ ಕೊರಗಬಾರದು. ತಾನು ನತದೃಷ್ಟ ಎನ್ನುವುದು ಜೀವದ ಹಿಂದಿರುವ ಚೈತನ್ಯಕ್ಕೆ ತೋರುವ ಅಗೌರವ..

No comments:

Post a Comment