Saturday 18 February 2012

ಎಲ್ಲವೂ ದೇವೇಚ್ಛೆ : ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿ

ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿಯವರ 1930ರ ಆದಿಯಿಂದಲೇ ಆರಂಭವಾಗುತ್ತದೆ. ಆಗ ಮಠದ ಸ್ವಾಮೀಜಿಗಳಾಗಿದ್ದ ಶ್ರೀ. ಉದ್ಧಾನ ಶಿವಯೋಗಿಯವರು ವಿರಕ್ತಾಶ್ರಮದ ಪರಂಪರೆಯನ್ನು ಮುನ್ನಡೆಸುತ್ತಿದ್ದರು. ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಮೂರನೇ ವರ್ಷ ಪದವಿಯಲ್ಲಿದ್ದ ಶಿವಣ್ಣ ( ಆಗ ಶಿವ ಕುಮಾರ ಸ್ವಾಮೀಜಿಯವರನ್ನು ಕರೆಯುತ್ತಿದ್ದುದು ಹೀಗೆ) ಅವರನ್ನು ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದರು. ನಂತರ ಸ್ವಾಮೀಜಿ ಪವಾಡ ಸದೃಶ ರೀತಿಯಲ್ಲಿ ಮಠವನ್ನು ಅಭಿವೃದ್ಧಿಪಡಿಸಿ, ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಈವತ್ತು ಮಠ 128 ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತದೆ. ೮,೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾತಿ, ಮತ ಭೇದವಿಲ್ಲದೆ ಉಚಿತ ಅಶನ,ವಸನ, ವಸತಿ ಮತ್ತು ಶಿಕ್ಷಣದ ವ್ಯವಸ್ಥೆ ನೀಡುತ್ತಿದೆ.
ಆದರೆ ಈ ಸುದೀರ್ಘ ಯಶಸ್ಸಿನ ಪಯಣ, ಅಷ್ಟು ಸುಲಭದ್ದಾಗಿರಲಿಲ್ಲ. ಆದರೆ ಸ್ವಾಮೀಜಿಯವರು ಈಗಲೂ ವಿನಮ್ರ ಭಾವದಿಂದ ಇದ್ದಾರೆ. " ಎಲ್ಲವೂ ದೇವೇಚ್ಛೆ’ ಎನ್ನುತ್ತಾರೆ. " ನಾನು ನನ್ನ ಪೂಜ್ಯ ಗುರುಗಳು ಆರಂಭಿಸಿದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನಷ್ಟೆ ಮಾಡಿದ್ದೇನೆ ಎನ್ನುವ ಪ್ರಬುದ್ಧ ಮಾತು ಸ್ವಾಮೀಜಿಯವರದ್ದು. ಅವರ ಈ ಸರಳತೆಯನ್ನು ಇಷ್ಟ ಪಡುವ ಅನೇಕ ಮಂದಿ, ಸ್ವಾಮೀಜಿಯವರನ್ನು ನಡೆದಾಡುವ ದೇವರು ಅಂತ ಗೌರವಿಸುತ್ತಾರೆ. ( ಮುಂದುವರಿಯುವುದು)

No comments:

Post a Comment