Tuesday 9 March 2010

ನಾಗಾವಾರ ಎಂಬ ಪುಟ್ಟ ಹಳ್ಳಿಗೆ ಹೋಗಿದ್ದಾಗ...





ಚೆನ್ನಪಟ್ಟಣಕ್ಕೆ ಸಮೀಪವಿರುವ ನಾಗಾವಾರ ಎಂಬ ಪುಟ್ಟ ಹಳ್ಳಿಗೆ ಹೋಗಿದ್ದಾಗ ದಾರಿಯಲ್ಲಿ ಕಂಡ ದೃಶ್ಯಗಳಿವು. ಹಳ್ಳಿಯಲ್ಲಿ ಇದ್ದಷ್ಟು ಹೊತ್ತು ಇತರ ಜಗತ್ತಿನ ಜಂಜಾಟವೆಲ್ಲ ಮಂಗಮಾಯವಾಗುತ್ತದೆ. ಹಳ್ಳಿಗರ ಮುಗ್ಧತೆ, ಅತಿಥಿ ಸತ್ಕಾರ ಗುಣ ಈಗಲೂ ಉಳಿದುಕೊಂಡಿದೆ ಎಂಬುದನ್ನು ನಾಗಾವಾರದಲ್ಲಿ ಕಂಡೆ. ಆದರೆ ರೈತಾಪಿಯೊಬ್ಬ ಕರೆಂಟಿಲ್ಲದೆ ಬೆಳೆಯೆಲ್ಲ ಒಣಗಿ ಹೋಗುತ್ತಿದೆ ಎಂದು ನೋವು ತೋಡಿಕೊಂಡಾಗ ಮನಸ್ಸು ಭಾರವಾಯಿತು. ದೇವರಲ್ಲಿ ಬೇಡುವುದಿಷ್ಟೇ. ಹಳ್ಳಿಗರ ಕಷ್ಟ ಕಾರ್ಪಣ್ಯ ಪಾರು ಮಾಡು. ವಿದ್ಯುತ್ ಕೊಡು.. ಅಂತ.

No comments:

Post a Comment