Monday 1 March 2010

ವಿಜಯ ಕರ್ನಾಟಕ ಕಚೇರಿಯಲ್ಲಿ ಹೋಳಿ ಸಂಭ್ರಮ..





















ಈವತ್ತು (ಮಾರ್ಚ್ ೧) ವಿಜಯ ಕರ್ನಾಟಕ ಕಚೇರಿಯಲ್ಲಿ ಹೋಳಿ ಹಬ್ಬ ಆಚರಿಸುವ ಉಮೇದು ಹಲವರಿಗೆ ಬಂದು ಬಿಟ್ಟಿತು. ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಎರಡು ದಿನಗಳ ಮೊದಲೇ ಸೂಚನೆ ಕೊಟ್ಟಿದ್ದರು. ಹೋಳಿ ಹಬ್ಬಕ್ಕೆ ಅವಕಾಶ ಇದೆ. ಆದರೆ ಕಚೇರಿ ಒಳಗೆ ಬಣ್ಣಗಳನ್ನು ಕಂಪ್ಯೂಟರ್, ಟೇಬಲ್ ಮೇಲೆ ಎಲ್ಲ ಚೆಲ್ಲುವ ಹಾಗೆ ಆಗಬಾರದು ಎಂದು ಸೂಕ್ಷ್ಮವಾಗಿ ತಿಳಿಸಿದ್ದರು.
ಅದರಂತೆ ಸಹೋದ್ಯೋಗಿಗಳಲ್ಲಿ ಕೆಲವರು ಹೋಳಿಯ ಸಂಭ್ರಮಕ್ಕೆ ಚಾಲನೆ ಕೊಟ್ಟರು. ಕೆಲವರು ಸಂಕೋಚದಿಂದ ಅವರವರ ಡೆಸ್ಕ್‌ನಲ್ಲಿ ಕುಳಿತು ಕೆಲಸದಲ್ಲಿ ಮುಳುಗಿದ್ದರು. ಅವರನ್ನೆಲ್ಲ ಉಳಿದವರು ಬರ‍್ಲೇ ಬೇಕು ಅಂತ ಒತ್ತಾಯಿಸಿ, ಕೈಹಿಡಿದು ಎಬ್ಬಿಸಿ, ಕೆಲವರಿಗೆ ಬೈದು (ಖುಷಿಯಲ್ಲಿ) ಕಚೇರಿಯ ಆವರಣದಲ್ಲಿ ಬಣ್ಣದೋಕುಳಿ ಮಾಡಿಸಲಾಯಿತು. ದೀಪಾ ಹಾಗೂ ಭದ್ರತಾ ಸಿಬ್ಬಂದಿಯವರಂತೂ ಸಿಕ್ಕಾಪಟ್ಟೆ ಒತ್ತಾಯ ಮಾಡುತ್ತಿದ್ದರು.ನಮ್ಮ ನೆರೆಯವರಾದ ಬೆಂಗಳೂರು ಮಿರರ್‌ನ ಸಿಬ್ಬಂದಿ ಕೂಡ ಭಾಗವಹಿಸಿದ್ದರು.
ಸ್ವಲ್ಪ ಹೊತ್ತಿನಲ್ಲಿ ತಮಾಷಿಗಳೂ ಜರುಗಿ ಹೋದವು. ಪ್ರತಾಪ್ ಸಿಂಹ ಗುರುತೇ ಸಿಗದಂತೆ ಓಡಾಡುತ್ತಿದ್ದರು. ಸಹೋದ್ಯೋಗಿಗಳನ್ನು ಆಫೀಸಿನ ಹೊರಗಿನಿಂದಲೇ ಕಿರುಚಿ ಕೂಗುತ್ತಿದ್ದರು. ಕೆಲವರು ಓಗೊಟ್ಟು ಹೊರಗೆ ಬರುತ್ತಿದ್ದರು. ಬಂದ ಕೂಡಲೇ ಬಣ್ಣದಿಂದ ಮಜ್ಜನ. ನಾನು ಕೂಡ ಏನು ನಡೆಯುತ್ತಿದೆ ಅಂತ ಎದ್ದು ಬಾಗಿಲಿನ ಕಡೆಗೆ ಹೋದೆ. ಅದೇ ತಪ್ಪಾಯಿತು..ಪ್ರತಾಪ್ ಸಿಂಹ ಬನ್ನಿ ರೀ..ಹೋಗಿ ರೀ..ಅಂತ ಕರೆದರು. ಕೈಯಲ್ಲಿ ಬಣ್ಣದ ಲಕೋಟೆ ಹಿಡಿದಿದ್ದರು. ಒಮ್ಮೆ ಬಾಗಿಲಿನಿಂದ ಹೊರಗೆ ಕಾಲಿಟ್ಟಿದ್ದೇ ತಡ, ಮುಖ, ತಲೆಗೆಲ್ಲ ಬಣ್ಣ ಎರಚಿದರು. ಇತರ ಸಹೋದ್ಯೋಗಿಗಳೂ ಸಾಕಷ್ಟು ಕೊಡುಗೆ ಕೊಟ್ಟರು. ಅವರ ಉತ್ಸಾಹದಲ್ಲಿ ಪಾಲ್ಗೊಂಡೆ. ನನ್ನ ಬೆನ್ನ ಹಿಂದೆ ಸುವರ್ಣ ಮೇಡಂ ಬಂದರು. ಅವರಿಗೂ ಬಣ್ಣದ ಸುರಿಮಳೆಯಾಯಿತು..ಒಟ್ಟಾರೆ ಕಚೇರಿಯಲ್ಲಿ ಐದಾರು ಮಂದಿಗೆ ಬಿಟ್ಟು ಉಳಿದವರಿಗೆಲ್ಲ ಹೋಳಿ ಬಣ್ಣದಲ್ಲಿ ಮುಳುಗಿಯಾಗಿತ್ತು. ಅಷ್ಟು ಹೊತ್ತಿಗೆ ನನಗೆ ಕ್ಯಾಮೆರಾ ನೆನೆಪಾಯಿತು. ಬ್ಯಾಗಿನಿಂದ ತೆಗೆದು ಚಿತ್ರಗಳನ್ನು ಸೆರೆಹಿಡಿದೆ. ಕಳೆದ ಐದು ವರ್ಷಗಳಿಂದ ವಿಜಯ ಕರ್ನಾಟಕ ಕಚೇರಿಯಲ್ಲಿದ್ದೇನೆ. ಆದರೆ ಈ ಸಲದ ಹೋಳಿ ವ್ಯಾಪಕವಾಗಿತ್ತು ಎಂದು ಅನ್ನಿಸುತ್ತಿದೆ. ಅಂದಹಾಗೆ ಆಗ ಸೆರೆ ಹಿಡಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ.

ಈ ಚಿತ್ರಗಳಲ್ಲಿ ಸಹೋದ್ಯೋಗಿ ಮಿತ್ರರಾದ ರಮೇಶ್, ವಿನಯ್.ನ, ಸುದರ್ಶನ್ ಚೆನ್ನಂಗಿಹಳ್ಳಿ, , ಎಂ.ಆರ್. ದಿಂಡಲ್‌ಕೊಪ್ಪ,ಮಹೇಶ್ ಯಲಗೋಡಮನೆ, ಯಶೋದಾ, ಎಲ್.ಪ್ರಕಾಶ್,ರಾಘವೇಂದ್ರ ಭಟ್, ಪ್ರಕಾಶ್ ಅಂತಾಪುರ,ರಮೇಶ್‌ಕುಮಾರ್ ನಾಯಕ್,ಪ್ರೇಮ್‌ಕುಮಾರ್, ಸುರೇಶ್,ಮಹೇಶ್, ಸಾಧು ಶ್ರೀನಾಥ್, ಬಸವರಾಜ್ ಭಾಷಾ ಗೂಳ್ಯಂ, ಪ್ರತಾಪ್ ಸಿಂಹ,ಹರೀಶ್ ಕೇರ ಯಶೋಧರ ಕೋಟ್ಯಾನ್ ಸೀತಾರಾಮ ಮಯ್ಯ,, ವಿನಾಯಕ ಶಶಿವಾಳ ಪ್ರೇಮ್ರಾಜ್ ಇದ್ದಾರೆ

No comments:

Post a Comment