Sunday 17 January 2010

ಭಗವಾನ್. ಅವರ ವಿನಯ, ಸೌಜನ್ಯ



ದೊಡ್ಡ ಬಳ್ಳಾಪುರದಲ್ಲಿ ಘಾಟಿಗೇಟ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವಕ್ಕೆ ನಿನ್ನೆ ಹೋಗಿದ್ದೆ. ಚಲನಚಿತ್ರ ನಿರ್ದೇಶಕ ದೊರೈ ಭಗವಾನ್ ಸಿಕ್ಕಿದ್ದರು. ವರನಟ ಡಾ. ರಾಜ್ ಕುಮಾರ್ ಅವರ ೩೫ಕ್ಕೂ ಹೆಚ್ಚು ಚಿತ್ರಗಳ ನಿರ್ದೇಶಕರು ಭಗವಾನ್. ಅವರ ವಿನಯ, ಸೌಜನ್ಯ, ಹಿತವಾದ ಮಾತುಗಾರಿಕೆ ಎಲ್ಲರಿಗೂ ಮಾದರಿ. ಅವರೊಡನೆ ಕಳೆದ ಅಷ್ಟೂ ಹೊತ್ತು ಸ್ಮರಣೀಯ. ಅದರ ಬಗ್ಗೆ ಶೀಘ್ರವೇ ಬರೆಯುತ್ತೇನೆ.
ಭಗವಾನ್ ಸಾರ್..ನಿಮ್ಮ ಅನುಭವದಷ್ಟು ವಯಸ್ಸೂ ನನಗಾಗದಿದ್ದರೂ, ನನ್ನನ್ನೂ ಸಾರ್ ಅಂತ ಬಹುವಚನದಲ್ಲಿ ಮಾತನಾಡಿದ್ದೀರಿ. ಅದರಲ್ಲಿ ಕೃತಕತೆ ಇರಲಿಲ್ಲ. ಆಗ ಸಂಕೋಚದಿಂದ ಮುದುರುವಂತಾಗುತ್ತಿತ್ತು. ನಿಜಕ್ಕೂ ನಿಮ್ಮಿಂದ ಇಂದಿನ ಯುವ ಜನಾಂಗ ಕಲಿಯಬೇಕಾದದ್ದು ಬೆಟ್ಟದಷ್ಟಿದೆ..

2 comments: