Thursday 23 July 2009

ಕನ್ನಡ ಕುಲ ಪುರೋಹಿತರ ಮನೆ !



ಕನ್ನಡ ಕುಲ ಪುರೋಹಿತ ಆಲೂರು ವೆಂಕಟ ರಾಯರು ಬಾಳಿದ ಮನೆ ಪಾಳು ಬಿದ್ದಿದೆ. ಇದನ್ನು ಕಂಡು ಮರುಗಿರುವ ಮಿತ್ರ ರಾಜ್ ಕುಮಾರ್ ಹೊಳೆ ಆಲೂರಿಗೆ ಹೋಗಿ ಚಿತ್ರಗಳನ್ನು ತಂದಿದ್ದಾರೆ. ಈ ಮಳೆಗಾಲ ಮುಗಿದೊಡನೆ ಪಾಳು ಬಿದ್ದಿರುವ ಈ ಮನೆಯನ್ನು ನವೀಕರಣಗೊಳಿಸಲಾಗುವುದು ಎಂದು ಆಲೂರರ ವಂಶಸ್ಥರು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಕಾಯೋಣವಲ್ಲವೇ.. ಆದ್ರೂ ಹೀಗೆಲ್ಲ ಆಗಬಾರದಿತ್ತು ಎಂದು ನೋವಾಗದಿರದು ಈ ಚಿತ್ರಗಳನ್ನು ಕಂಡಾಗ...
ಕರ್ನಾಟಕವೇ ನಮ್ಮ ಕರ್ಮಭೂಮಿ. ಮಹಾಮಹಿಮರ ಪಾದಧೂಳಿಯಿಂದ ಪುನೀತವಾದ ಭೂಮಿಯಲ್ಲವೇ ? ಕರ್ನಾಟಕಕ್ಕಾಗಿ ಕಾರ್ಯ ಮಾಡುವಾಗ ನಾನು ರಾಷ್ಟ್ರೀಯತ್ವವನ್ನೆಂದೂ ಕಣ್ಮರೆ ಮಾಡಿಲ್ಲ. ನನಗೆ ಅವೆರಡರಲ್ಲಿ ವಿರೋಧವೇ ಕಾಣುವುದಿಲ್ಲ. ನನಗೆ ಕರ್ನಾಟಕವೆಂದರೆ ಅದೊಂದು ಕಿರಣ ಕೇಂದ್ರ ಕಾಜು. ಅದರೊಳಗಿಂದ ನನಗೆ ಭರತಭೂಮಿ ಮಾತ್ರವೇ ಏಕೆ, ಇಡಿ ವಿಶ್ವವೇ ಕಾಣುತ್ತದೆ. ವಿಶ್ವದ ಕಿರಣಗಳೂ ನನ್ನ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿವೆ, ಅಂತರ್ಯಾಮಿಯಾಗಿವೆ ಎಂದು ಸಾರಿದ ಮಹನೀಯರು ಆಲೂರು ವೆಂಕಟರಾಯರು. ಅಂತಹ ಪ್ರಾತಃಸ್ಮರಣೀಯರನ್ನು ಮರೆಯಬಾರದು.

No comments:

Post a Comment