೧. ನೀವು ಬದುಕುವ ಸಲುವಾಗಿ ಹೊರಗಿನದ್ದನ್ನು ಬದಲಿಸಲು ಹೋಗಬಹುದು. ಆದರೆ ಅದರಿಂದಲೇ ನಿಮಗೆ ತೃಪ್ತಿ ಸಿಗುವುದಿಲ್ಲ. ಬದಲಾವಣೆಗೆ ಮತ್ತೊಂದು ಯಾವುದೋ ಉಳಿದುಕೊಳ್ಳುತ್ತದೆ. ಅದುವೇ ಆಂತರಿಕ ಬದಲಾವಣೆ. ಅದಿಲ್ಲದಿದ್ದರೆ ಹೊರಗಿನ ಬದಲಾವಣೆ ಪೂರ್ಣವಾಗುವುದಿಲ್ಲ....೨. ಯಾವಾಗ ಪ್ರೀತಿ ಮತ್ತು ದ್ವೇಷವೆರಡೂ ಗೈರು ಹಾಜರಾಗುತ್ತವೆಯೋ, ಆವಾಗ ಪ್ರತಿಯೊಂದೂ ಸ್ಪಷ್ಟ ವಾಗುತ್ತವೆ
೩. ಜ್ಞಾನ ಎಂದರೆ ಮಾಹಿತಿ ಅಲ್ಲ, ಪರಿವರ್ತನೆ
೪. ನಿಮ್ಮೊಳಗಿನ ಅನೂಹ್ಯ ರಹಸ್ಯಗಳು ನಿಮ್ಮೆದುರು ತೆರೆದುಕೊಳ್ಳಬೇಕಿದ್ದರೆ, ಅಚ್ಚರಿ ನಿಮ್ಮಲ್ಲಿರಲಿ. ಪ್ರಶ್ನಿಸುವವರ ಮುಂದೆ ನಿಗೂಢಗಳು ತೆರೆದುಕೊಳ್ಳಲಾರವು. ಪ್ರಶ್ನಿಸುವವರು ಶೀಘ್ರವಾಗಿ ಇಲ್ಲವೇ ಕೊನೆಗೆ ಪವಿತ್ರ ಗ್ರಂಥಗಳೊಂದಿಗೆ ಪರ್ಯವಸಾನ ಹೊಂದುತ್ತಾರೆ. ಯಾಕೆಂದರೆ ಅವುಗಳ ತುಂಬ ಉತ್ತರಗಳಿರುತ್ತವೆ. ಉತ್ತರಗಳು ಯಾವತ್ತಿಗೂ ಅಪಾಯಕಾರಿ. ಅವುಗಳು ನಿಮ್ಮ ಅಚ್ಚರಿಯನ್ನು ಕೊಲ್ಲುತ್ತವೆ.

No comments:
Post a Comment