Friday 2 October 2009

ಮೆಚ್ಯೂರಾದ ಭಗ್ನಪ್ರೇಮಿ...

ದಿನದಿಂದ ದಿನಕ್ಕೆ ಮನುಷ್ಯ ಮೆಚ್ಯೂರ್ ಆಗುತ್ತಿದ್ದಾನಾ ?
ಈಗ ಯಾರೂ ಜನುಮ ಜನುಮದಾ ಅನುಬಂಧ ಅಂತ ರಾಗ ಹಾಡುವುದಿಲ್ಲ.
ಹುಡುಗೀರೂ ಅಂತ ಹಾಡುಗಳನ್ನೆಲ್ಲ ನಂಬಲ್ಲ. ಏನಿದ್ದರೂ ಈವತ್ತು ಮಾತ್ರ ಸತ್ಯ. ಏನಿದ್ದರೂ ಲೆಕ್ಕ ಈ ಜನ್ಮದಲ್ಲೇ ಚುಕ್ತ ಆಗಬೇಕು..ಆಗುತ್ತದೆ ಎಂಬ ಪ್ರಬಲ ನಂಬಿಕೆ ಕೂಡಾ.
ಪ್ರೀತಿಯಲ್ಲಿ ಸೋತರೆ ಸೇಡು ತೀರಿಸುವ ದಾರೀನೇ ಬೇರೆ. ನೀನು ಸಿಗದಿದ್ದರೆ ಬದುಕನ್ನು ಛಿದ್ರ ಮಾಡುವ ಪ್ರಶ್ನೆಯೇ ಇಲ್ಲ..ಆಕೆ ಪ್ರೀತಿಸುವುದಿಲ್ಲ ಎಂದು ಕನ್ನಡಿಯಷ್ಟು ಸ್ಪಷ್ಟವಾದ ಮೇಲೆ ಹರ್ಟ್ ಆಗುತ್ತೆ. ಆದರೆ ತಾಕತ್ತಿದೆಯಲ್ಲವೇ, ಅದನ್ನು ಆರಿಸುವ ಪ್ರಶ್ನೆಯೇ ಇಲ್ಲ...ಬದುಕು ಇದೆಯಲ್ಲವೇ..ಅದನ್ನು ಸದ್ಯದ ದೃಷ್ಟಿಯಿಂದ ನೋಡಿಕೊಂಡು ಕಟ್ಟಿಕೊಳ್ಳುವ ರೀತಿಯೇ ಉತ್ತರವಾಗುತ್ತದೆ. ಅಲ್ಲಿ ನಾನೇ...ಸಾಕಿದಾ ಗಿಣಿ ಹಾಡಿಗೆ ನೋ ಛಾನ್ಸ್. ಇದ್ದಷ್ಟು ದಿನ ಯಾರ ಅನುಕಂಪಕ್ಕೂ ಕಾಯದೆ ಕಳೆದು ಹೋದ ಪ್ರೀತಿಯನ್ನು ಮತ್ತೊಂದರಲ್ಲಿ ದಕ್ಕಿಸಿಕೊಳ್ಳುವುದು. ವಾಸ್ತವಕ್ಕೆ ಮುಖಾಮುಖಿಯಾಗುವುದು.
ನನಗನ್ನಿಸುತ್ತಿದೆ ಭಗ್ನ ಪ್ರೇಮಿಗಳು ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಭಗ್ನ ಪ್ರೇಮದಲ್ಲೂ ತಾಕತ್ತನ್ನು ಮರೆಯದೆ ಪ್ರಬುದ್ಧರಾಗುತ್ತಿದ್ದಾರೆ. ಬದುಕಿನುದ್ದಕ್ಕೂ ಅಳುಬುರಕರಾಗುವುದಿಲ್ಲ. ಕೈ ಜಾರಿದ ಗುಲಾಬಿಯನ್ನೇ ಹುಡುಕುತ್ತ ಟೈಮ್ ವೇಸ್ಟ್ ಮಾಡಲ್ಲ. ಗುಲಾಬಿಯ ತೋಟವನ್ನೇ ಸೃಷ್ಟಿಸುತ್ತಾರೆ. ಬದುಕಿನ ವಿಕಾಸದ ಅತ್ಯುನ್ನತ ಹಂತವೂ ಇದೇ ಅಲ್ಲವೇ.

No comments:

Post a Comment