ಇಡೀ ಉತ್ತರ ಕರ್ನಾಟಕ ನೆರೆಯ ಹಾವಳಿಗೆ ತತ್ತರಿಸಿದೆ. ಜೀವ ಹಾನಿ ಹಾಗೂ ಆಸ್ತಿ ಪಾಸ್ತಿಯ ನಷ್ಟ ಅಷ್ಟಿಷ್ಟಲ್ಲ. ೨೦ ಸಾವಿರ ಕೋಟಿ ರೂ. ನಷ್ಟವಾಗಿರುವುದರ ಜತೆಗೆ ಸಹಸ್ರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ನಿಜಕ್ಕೂ ಇದೊಂದು ರಾಷ್ಟ್ರೀಯ ವಿಪತ್ತು. ಇಂಥ ಸಂದರ್ಭದಲ್ಲಿ ಪಕ್ಷ ಭೇದ ಮರೆತು ರಾಜಕಾರಣಿಗಳು ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕೈಗೊಳ್ಳಬೇಕು. ಈವತ್ತು ಮೂರ್ನಾಲ್ಕು ಹೆಲಿಕಾಪ್ಟರ್ಗಳು ಆಹಾರದ ಮೂಟೆಗಳನ್ನು ನಾಯಿಗಳಿಗೆ ಬಿಸಾಡಿದಂತೆ ಕೆಳಗೆ ಎಸೆಯುತ್ತಿವೆ. ಸಂಕಷ್ಟಪೀಡಿತ ಜನ ಓಡೋಡಿ ಮುಗಿಬಿದ್ದು ಆಹಾರದ ಮೂಟೆಗಳನ್ನು ಪಡೆಯಲು ಪರದಾಡುತ್ತಿದ್ದಾರೆ. ಎಂಥಾ ದುರಂತವಿದು..ಪ್ರತಿಯೊಬ್ಬರೂ ಉತ್ತರ ಕರ್ನಾಟಕದ ಜನತೆಯ ನೋವನ್ನು ಹಂಚಿಕೊಳ್ಳಬೇಕಾಗಿದೆ.
ದುರದೃಷ್ಟವಶಾತ್ ಪರಿಹಾರ ಕಾರ್ಯದಲ್ಲಿಯೂ ಕೇಂದ್ರ ಸರಕಾರ ಅಕ್ಷರಶಃ ತಾರತಮ್ಯ ನಡೆಸುತ್ತಿದೆ. ಆಂಧ್ರ ಪ್ರದೇಶದಲ್ಲಿ ಕರ್ನಾಟಕದಷ್ಟು ಹಾನಿಯಾಗಿರದಿದ್ದರೂ ಪರಿಹಾರ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದಂತೂ ನಿಜ.
Sunday 4 October 2009
Subscribe to:
Post Comments (Atom)
No comments:
Post a Comment