ರಾಜ್ಯದಲ್ಲಿ ಗ್ರಾಮೀಣ ಬಿಪಿಒಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಸಮೀಪದ ಬಾಬುರಾಯನಕೊಪ್ಪಲಿನಲ್ಲಿ ರಾಜ್ಯದ ಮೊಟ್ಟ ಮೊದಲ ಗ್ರಾಮೀಣ ಬಿಪಿಒ ಆರಂಭವಾಗಿದೆ. ಹೀಗಿದ್ದರೂ ಕೆಲವು ಪತ್ರಿಕೆಗಳಲ್ಲಿ ದೇಶದ ಮೊಟ್ಟ ಮೊದಲನೆಯ ಗ್ರಾಮೀಣ ಬಿಪಿಒ ಎಂದು ವರದಿ ಪ್ರಕಟವಾಗಿದೆ. ಆದರೆ ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಿಪಿಒ ಘಟಕಗಳಿವೆ. ತರಾತುರಿಯಲ್ಲಿ ವರದಿ ಪ್ರಕಟಿಸಿದರೆ ಇಂಥ ತಪ್ಪು ಮಾಹಿತಿಗಳೇ ರವಾನೆಯಾಗುತ್ತವೆ. ಅದಿರಲಿ, ಬಾಬುರಾಯನ ಕೊಪ್ಪಲಿನಲ್ಲಿ ಸರಕಾರದ ೪೦ ಲಕ್ಷ ರೂ ಸಬ್ಸಿಡಿ ನೆರವಿನೊಂದಿಗೆ ಗ್ರಾಮೀಣ ಬಿಪಿಒ ಸ್ಥಾಪಿಸಿರುವ ಸಂಸ್ಥೆಯ ಪ್ರತಿನಿಧಿಯ ಜತೆ ನಿನ್ನೆ ದೂರವಾಣಿ ಮೂಲಕ ಮಾತನಾಡಿದ್ದೆ. ಆತ ಒಂದಕ್ಷರ ಕನ್ನಡ ಮಾತನಾಡುತ್ತಿರಲಿಲ್ಲ. ಇಂಗ್ಲಿಷ್ ನಲ್ಲೇ ಮಾತನಾಡಿದ. ಹೆಚ್ಚಿಗೆ ಮಾಹಿತಿಯೂ ಆ ಭೂಪನಿಗೆ ಗೊತ್ತಿರಲಿಲ್ಲ. ನೀವು ಕೋರಮಂಗಲದ ಕಚೇರಿಗೆ ಹೋಗಿ, ಅಲ್ಲಿ ಮಾಹಿತಿ ಸಿಗುತ್ತೆ ಎಂದ. ಹೋಗಲಿ, ಹೇಗಿದೆ ಡಿಮ್ಯಾಂಡು ? ಎಂದೆ. ಅದಕ್ಕೆ ಆತ ಹೇಳಿದ- ತುಂಬ ಬೇಡಿಕೆ ಇಲ್ಲಿದೆ. ಇದೇ ಊರಿನಲ್ಲಿ ಇನ್ನೆರಡು ಯೂನಿಟ್ ತೆರೆದರೂ ನಡೆಯುತ್ತೆ ಎಂದ.
ಆದರೆ ಈ ಘಟಕದಲ್ಲಿ ತಿಂಗಳಿಗೆ ೩ರಿಂದ ಮೂರೂವರೆ ಸಾವಿರ ರೂ. ಸಂಬಳ ಕೊಡುವ ಭರವಸೆ ನೀಡಿದ್ದಾರಂತೆ ಎಂದು ನನಗೆ ಬೇರೆಯವರಿಂದ ಗೊತ್ತಾಗಿದೆ.
ಇದು ಕಡಿಮೆಯಾಯಿತು ಎಂದು ನನಗನ್ನಿಸಿತು...ಸರಕಾರದಿಂದ ಇಷ್ಟೆಲ್ಲ ನೆರವು ಪಡೆದು ಮೂರು ಸಾವಿರ ಸಂಬಳ ಕೊಡೋದಾ ?
ಲಭ್ಯ ಪುಸ್ತಕಗಳು.....
4 days ago
No comments:
Post a Comment