
ಆದದ್ದಷ್ಟು-
ರಾಜೇಶ್ ಮಾಯಣ್ಣ ಇತ್ತೀಚೆಗೆ ೩೦ ಮಂದಿಯನ್ನು ( ೨೦೦೮ ಮತ್ತು ೨೦೦೯ರಲ್ಲಿ ಪಾಸಾದವರನ್ನು) ತಮಗೆ ತಿಳಿದಿದ್ದ ಸಂಸ್ಥೆಯೊಂದಕ್ಕೆ ರೆಫರ್ ಮಾಡಿದರು. ಆದರೆ ಮೂವರು ಮಾತ್ರ ಆಯ್ಕೆಯಾಗಿದ್ದರು. ಕನಿಷ್ಠ ೨೫ ಮಂದಿಗೆ ಕೆಲಸ ಸಿಗಬಹುದು ಎಂದು ಮಾಯಣ್ಣ ಭಾವಿಸಿದ್ದರು.
ಇಂಟರ್ ವ್ಯೂ ಮಾಡಿದ್ದ ಸಮಿತಿಯಿಂದ ಇವರಿಗೆ ಉತ್ತರ ಬಂತು- ಅಭ್ಯರ್ಥಿಗಳಲ್ಲಿ ಹಲವಾರು ಮಂದಿಗೆ ಉತ್ತಮ ತಾಂತ್ರಿಕ ನೈಪುಣ್ಯತೆ ಇದ್ದರೂ, ವಿಷಯದ ಮೇಲೆ ಆತ್ಮ ವಿಶ್ವಾಸದ ಕೊರತೆ ಇತ್ತು. ಆದ್ದರಿಂದ ಅವರವರ ವಿಷಯದಲ್ಲಿ ಅಪ್ ಡೇಟೆಡ್ ಮಾಡಿ ಆತ್ಮವಿಶ್ವಾಸ ತುಂಬಿ ಕಳಿಸಿ..ಇದರಿಂದ ಕೆಲಸಕ್ಕೆ ಸಹಾಯ ಆಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ಆದ್ದರಿಂದ ಮಿತ್ರರೇ,
ಯಾವತ್ತಿಗೂ ಕಲಿತ ವಿಷಯದಲ್ಲಿ ನಿಪುಣರಾಗುವುದರ ಜತೆಗೆ ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ. ಕೆಲವು ವಿಷಯಗಳಲ್ಲಿ ಪರಿಣತಿ ಸಾಕಷ್ಟು ಇಲ್ಲದಿದ್ದರೂ, ಸರಿಯೇ, ಆತ್ಮ ವಿಶ್ವಾಸವನ್ನು ಮಾತ್ರ ಯಾವುದೇ ಕ್ಷಣದಲ್ಲಿ ಬಿಟ್ಟುಕೊಳ್ಳದಿರಿ..
No comments:
Post a Comment