Tuesday 15 September 2009

ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ನಡೆದಾಗ ಅನ್ನಿಸಿದ್ದು

ಮೈಸೂರಿನಲ್ಲಿ ನಿನ್ನೆ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ನಡೆದ, ಕಂಪನಿಯ ಗ್ಲೋಬಲ್ ಎಜ್ಯುಕೇಶನ್ ಸೆಂಟರ್‌ನ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದೆ. ಇದುವರೆಗೆ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಒಂದು ಸಲ ಕ್ಯಾಂಪಸ್ಸಿನೊಳಗೆ ಕಾಲಿಟ್ಟೊಡನೆ ವಿನೂತನ ಅನುಭವದ ಪ್ರಪಂಚ ತೆರೆದುಕೊಂಡಿತು.
ಇಡೀ ದೇಶವೇ ಹೆಮ್ಮೆಪಡುವಂತಹ ಜಾಗತಿಕ ಮಟ್ಟದ ಕಾರ್ಪೊರೇಟ್ ತರಬೇತಿ ಕೇಂದ್ರವನ್ನು ಇನ್ಫೋಸಿಸ್ ಮೈಸೂರಿನಲ್ಲಿ ಸ್ಥಾಪಿಸಿದೆ. ಅದರ ವಿಸ್ತಾರ, ವಾಸ್ತುಶಿಲ್ಪ, ಅಂದ ಚೆಂದ, ವೈಶಿಷ್ಟ್ಯವನ್ನು ಬಣ್ಣಿಸಲು ಪದಗಳು ಸಿಗುತ್ತಿಲ್ಲ. ಸುಮಾರು ೧೦ ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣದ ಭವ್ಯ ಕಟ್ಟಡ ಅನೇಕ ಪ್ರಥಮಗಳನ್ನು ಒಳಗೊಂಡಿದೆ. ಇಂತಹ ವಿರಾಟ್ ಕಟ್ಟಡವನ್ನು ಕಟ್ಟುವಂತೆ ಆರ್ಕಿಟೆಕ್ಟರ್‌ಗಳಿಗೆ ಸಲಹೆ ನೀಡಿದ ನಾರಾಯಣ ಮೂರ್ತಿ ನಿಜಕ್ಕೂ ರಾಷ್ಟ್ರದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಅವರ ಕೆಲಸ ಕಾರ್ಯಗಳು ಶಾಶ್ವತವಾಗಿ ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
ರಾಜ್ಯ ಸರಕಾರದಿಂದ ಇನೋಸಿಸ್‌ಗೆ ೩೩೭ ಎಕರೆ ಜಮೀನನ್ನು ಹಸ್ತಾಂತರಿಸಿದಾಗ ಅದೊಂದು ಬಂಜರು ಭೂಮಿಯಾಗಿತ್ತು. ಎಣಿಸಲು ಎರಡು ಗಿಡ ಮರಗಳಿರಲಿಲ್ಲ. ಈವತ್ತು ೩೫ ಸಾವಿರ ಗಿಡಮರಗಳು ಅಲ್ಲಿ ನೆರಳು ಕೊಡುತ್ತಿವೆ. ಕ್ಯಾಂಪಸ್ಸಿನೊಳಗೆ ಪ್ರವೇಶಿಸುತ್ತಿದ್ದಂತೆ ಬೇರೆಯೇ ಲೋಕಕ್ಕೆ ಹೋದಂತಾಗುತ್ತದೆ. ಇನಿ, ನಾರಾಯಣಮೂರ್ತಿ, ಸುಧಾ ಮೂರ್ತಿ, ನಂದನ್ ನೀಲೇಕಣಿ ಮುಂತಾದವರ ಬಗ್ಗೆ ಹೆಮ್ಮೆ ತಾನಾಗಿ ಮೂಡುತ್ತದೆ..ಅಲ್ಲಿ ನನಗನ್ನಿಸಿದ್ದನ್ನು ಮುಂದೆ ಬರೆಯುವೆ.

No comments:

Post a Comment