
ರಾಜ್ಯದ ವೈಶಿಷ್ಟ್ಯವೇನೆಂದರೆ ಯಾವುದೇ ನಗರ ಅಥವಾ ಪಟ್ಟಣಗಳಲ್ಲಿ ಒಂದೆರಡು ಗಂಟೆ ಪ್ರಯಾಣಿಸಿದರೆ, ಆಯಾ ಭಾಗದಲ್ಲಿನ ಹಳ್ಳಿಗಳ ಲೋಕ ತೆರೆದುಕೊಳ್ಳುತ್ತದೆ. ಅಲ್ಲದೆ ಪ್ರವಾಸಿ ತಾಣಗಳಲ್ಲಿ ನಿಜಕ್ಕೂ ಪರಿಸರವನ್ನು, ವೈವಿಧ್ಯಮಯ ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಸೈಕಲ್ ಸವಾರಿ ಮಾಡಬೇಕು. ನಿಸ್ಸಂದೇಹವಾಗಿ ಸೈಕಲ್ ಟೂರಿಸಂ ಅನ್ನು ಬೆಳೆಸಲು ಸಮೃದ್ಧ ಅವಕಾಶ ನಮ್ಮಲ್ಲಿದೆ. ಇದರಿಂದ ಪ್ರವಾಸಿ ತಾಣಗಳ ಸುತ್ತುಮುತ್ತಲಿನ ಹಳ್ಳಿಗರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ. ಪ್ರವಾಸಿಗರಿಗೆ ಹೊಸ ಮಿತವ್ಯಯದಲ್ಲಿ ಹೊಸ ಅನುಭವವಾಗುತ್ತದೆ. ವಿದೇಶಗಳ ಪ್ರವಾಸೋದ್ಯಮ ವಲಯದಲ್ಲಿ ಇಂತಹ ಸೈಕಲ್ ಪ್ರವಾಸವೇ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರ ಮುಖ್ಯವಾದ ಲಕ್ಷಣವೇ ವಿನೂತನ ಅನುಭವ, ಮೋಜು ಮತ್ತು ಸ್ವಾರಸ್ಯಕರ. ಉದಾಹರಣೆಗೆ ಬೆಂಗಳೂರಿನಲ್ಲಿ ಸಮಾ ದುಡಿಯುವ ಮಂದಿ ವಾರಾಂತ್ಯದಲ್ಲಿ ಸುತ್ತುಮುತ್ತಲಿನ ಪ್ರವಾಸಿ ತಾಣಗಳಿಗೆ ಹಾಗೂ ಸಮೀಪದ ಹಳ್ಳಿಗಳಿಗೆ ಹೋಗುತ್ತಾರೆ. ಎಷ್ಟೋ ಮಂದಿ ಬೈಕನ್ನೇರಿ ಗುಂಪಾಗಿ ಮಂಡ್ಯ, ಶ್ರೀರಂಗಪಟ್ಟಣ, ಶಿವನ ಸಮುದ್ರ, ಮಧುಗಿರಿ ಅಂತ ತೆರಳುತ್ತಾರೆ. ಅಲ್ಲಿನ ಹಳ್ಳಿಗರು ಸೈಕಲ್ ಪ್ರವಾಸವನ್ನು ಆಯೋಜಿಸಿದರೆ ಆದಾಯ ಖಚಿತ.
ಸೈಕಲ್ ಜತೆಗೆ : ಅಂದಹಾಗೆ ಬರೀ ಸೈಕಲ್ ಮಾತ್ರ ಕೊಟ್ಟು ಬಿಡುವುದು ಸರಿಯಲ್ಲ. ಆ ಸೈಕಲಿನಲ್ಲಿ ಸವಾರಿ ಸುಲಭವಾಗಲು ಗೇರ್ ಇರಲಿ. ಕುಡಿಯುವ ನೀರು ಅಥವಾ ತಂಪು ಪಾನೀಯ ಇಡಲು ಚೌಕಟ್ಟಿರಲಿ. ಕುರುಕಲು ತಿಂಡಿ, ಊಟ, ತಿನಿಸನ್ನು ಇಡಲು ಜಾಗವಿರಲಿ. ಸೈಕಲ್ನಲ್ಲೇ ನೋಡಬಹುದಾದ ಸ್ಥಳಗಳ ಪಟ್ಟಿ ತಯಾರಿಸಿ. ವೆಬ್ಸೈಟ್, ಬ್ಲಾಗ್, ಮೊಬೈಲ್, ಎಸ್ಸೆಮ್ಮೆಸ್ ಮೂಲಕ ಬಿಸಿನೆಸ್ ಅನ್ನು ಪ್ರಚಾರ ಮಾಡಿ. ಬೇಕಾದರೆ ಟ್ರಾವೆಲ್ ಏಜೆಂಟ್, ಬ್ರೋಕರ್ಗಳ ಸಹಯೋಗವನ್ನು ಪಡೆದು ಮಾರುಕಟ್ಟೆಯನ್ನು ಸೃಷ್ಟಿಸಿ. ಕೆಲವರಿಗೆ ಬೆಟ್ಟ ಗುಡ್ಡಗಳನ್ನು ಸೈಕಲ್ಮೂಲಕ ಹತ್ತುವ ಸಾಹಸ ಪ್ರವೃತ್ತಿ ಇರುತ್ತದೆ. ಇನ್ನು ಕೆಲವರಿಗೆ ಸುಮ್ಮನೆ ಅಲೆಯುವುದೇ ಮುದ ಕೊಡುತ್ತದೆ. ಅಂತಹವರನ್ನೆಲ್ಲ ಆಕರ್ಷಿಸುತ್ತದೆ ಸೈಕಲ್..
No comments:
Post a Comment