Tuesday 1 September 2009

ಹುಳಿಯಾಗಿದ್ದರೆ ಕಾಯಿ, ಬಾಲ್ಯದ ನೆನಪು ಜಾಸ್ತಿ...

ಚಿಕ್ಕವನಿದ್ದಾಗ ನೆಕ್ಕರೆ ಎಂಬ್ ಹೆಸರಿನ ಮಾವಿನ ಕಾಯಿ ಎಂದರೆ ತುಂಬಾ ಪ್ರೀತಿಯಿಂದ ತಿನ್ನುತ್ತಿದ್ದೆ.
ಹುಳಿ ಮಾವಿನ ಕಾಯಿ, ಪೇರಳೆ ಕಾಯಿ, ತೆಂಗಿನ ಕಾಯಿಯ ಚೂರು, ಹಲಸಿನ ಹಪ್ಪಳ, ಲಿಂಬೆ ಹಣ್ಣು, ನೆಲ್ಲಿಕಾಯಿ, ನೇರಳೆ ಹಣ್ಣು, ಹಸಿ ನೆಲಗಡಲೆ ಎಂದರೆ ತಿನ್ನದೆ ಬಿಡುತ್ತಿರಲಿಲ್ಲ. ಹುಳಿ ಮಾವಿನ ಕಾಯಿಯ ಸೊನೆಯನ್ನು ತೆಗೆದು, ಉಪ್ಪು ಮತ್ತು ಮೆಣಸು ಬೆರೆಸಿ ತಿನ್ನುವಾಗ ಜಗತ್ತೇ ಮರೆತು ಹೋಗುತ್ತಿತ್ತು. ಈಗಲೂ ನಿಂಬೆ ಹಣ್ಣು, ನೆಲ್ಲಿ, ಹುಳಿ ಮಾವಿನ ಕಾಯಿ ತಿನ್ನೋದು ಅಂದರೆ ಬೇರೇನೂ ಬೇಕಾಗುವುದಿಲ್ಲ. ಹುಳಿಗೆ ಅಂಥ ತಾಕತ್ತಿದೆ. ಹುಳಿಯಾದ ನೆಲ್ಲಿ ತಿನ್ನುವಾಗ ಹಲ್ಲಿಗೆ ನಾಟುವುದಿಲ್ಲವೇ ? ಎಂದು ಕೆಲವರು ಹೇಳುತ್ತಾರೆ. ಆದರೆ ಇದುವರೆಗೆ ಹಾಗೆ ನನಗನ್ನಿಸಿಲ್ಲ. ನನಗಂತೂ ಹುಳಿಯಾಗಿರುವ ಕಾಯಿ ಎಂದರೆ ಬಾಲ್ಯದ ನೆನಪುಗಳನ್ನು ಚಪ್ಪರಿಸಲು ಅನುವು ಮಾಡಿಕೊಡುವ ಮಹತ್ವದ ಪದಾರ್ಥಗಳೂ ಆಗಿವೆ.
ಹೀಗೊಂದು ಟಿಪ್ಸ್ : ಅವರೇನೋ, ಪತ್ರಿಕೆಯವರು ತಮ್ಮ ಫೋಟೊ ಹಾಕುತ್ತಾರೆ ಎಂದು ಸಾವಯವ ಬೇಸಾಯ ಕೈಗೊಳ್ಳಲಿಲ್ಲ. ಸ್ನೇಹಿತರು, ಅಕ್ಕಪಕ್ಕದವರು ಮಾಡಿದ್ದನ್ನು ಕಂಡು ತಾವು ಕೂಡ ಅನುಸರಿಸಿದರು. ಅಥವಾ ತರಬೇತಿ ಪಡೆದು ಮಾಡುತ್ತಾರೆ.
ಇವರು ನಾವು ಹೋದಾಗ ತಮ್ಮದೇ ಧಾಟಿಯಲ್ಲಿ ವಿವರಿಸುತ್ತಾರೆ. ಆದರೆ, ಒಂದು ಸಲ ಪತ್ರಿಕೆಯಲ್ಲಿ ಅವರ ಚಿತ್ರ ಪ್ರಕಟವಾದ ನಂತರ ಅವರಲ್ಲೊಂದು ಬದಲಾವಣೆ ತಣ್ಣಗೆ ಆಗಿ ಬಿಡುತ್ತದೆ.
ನಾನಿನ್ನು ಸಾರ್ವಜನಿಕ ವ್ಯಕ್ತಿ, ಪತ್ರಿಕೆಯವರು ಬಂದಾಗ ಏನಾದರೂ ಹೇಳಬೇಕು ಎಂಬ ಭಾವನೆ ಉಂಟಾಗುತ್ತದೆ. ಮಾತನಾಡುತ್ತ ಕೇಳದೇ ಇದ್ದರೂ ಫೋಟೋಗೆ ಫೋಸು ಕೊಡುವಂತೆ ಇರುತ್ತಾರೆ. ಎಲ್ಲ ಬಲ್ಲವರಂತೆ ಇರಲು ಬಯಸುತ್ತಾರೆ. ಆದರೆ ಇವರನ್ನು ಒಪ್ಪಿಕೊಳ್ಳಬಹುದು. ಮಾನವ ಸಹಜ ಗುಣಗಳಿವು ಎನ್ನಬಹುದು. ಆದರೆ ಇನ್ನು ಕೆಲವರಿದ್ದಾರೆ.
ತಮ್ಮಿಂದಲೇ ಪತ್ರಿಕೆಗೆ ಹೊಸ ಸುದ್ದಿ ಸಿಕ್ಕಿ ಉಪಕಾರ ಆಯಿತು ಎಂದು ಭಾವಿಸುತ್ತಾರೆ. ಪತ್ರಿಕೆಯ ಪ್ರತಿನಿಧಿಗಳಿಗೇ ಪತ್ತೆದಾರಿ ವರದಿ ಬರೆಯಲು ಹೇಳಿಕೊಡುವಂತೆ ಫೋಸು ಕೊಡುತ್ತಾರೆ. ಇವರ ಸಹವಾಸ ಕಿರಿಕಿರಿ ಆಗುತ್ತದೆ.

No comments:

Post a Comment