
ಕೆಲವು ದಿನಗಳ ಹಿಂದೆ ಕೋರಮಂಗಲಕ್ಕೆ ಹೋಗಿದ್ದೆ. ಮಾರುತಿ ಇನ್ಫೋಟೆಕ್ ಸೆಂಟರ್ನಲ್ಲಿರುವ ವೊಡಾಫೋನ್ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಕೆ ಶಂಕರ ನಾರಾಯಣನ್ ಅವರನ್ನು ಭೇಟಿಯಾಗಿದ್ದೆ. ತಮಿಳುನಾಡಿನ ಅವರು ಚೆನ್ನಾಗಿ ಮಾತನಾಡುತ್ತಾರೆ. ತಿಳಿಯಾದ ಹಾಸ್ಯ ಬೆರೆತ ದನಿಯಲ್ಲಿ. ಕಂಪನಿಯ ಸುದ್ದಿ ಸಮಾಚಾರದ ಬಗ್ಗೆ ಹೇಳಿದರು. ಮಾತಿನ ಮಧ್ಯೆ ಹೇಳಿದ್ರು- ನೀವು ಚೆನ್ನಾಗಿ ಮನಮುಟ್ಟುವಂತೆ ಬರೆದರೆ ಲಕ್ಷಾಂತರ ಓದುಗರಿಗೆ ಸರಳವಾಗಿ ಅರ್ಥವಾಗುತ್ತೆ. ನಿಮಗೆ ಬಿಟ್ಟರೆ ಬೇರೆ ಯಾರಿಗೂ ಸುದ್ದಿ ಹೇಳಿಲ್ಲ. ಇಡೀ ಇಂಡಿಯಾದಲ್ಲಿ ಇನ್ನುಮುಂದೆ ಕೇವಲ ನಿಮಿಷಕ್ಕೆ ೫೦ ಪೈಸೆ ವೆಚ್ಚದಲ್ಲಿ ವೊಡಾಫೋನ್ನಿಂದ ಮೊಬೈಲ್/ಸ್ಥಿರವಾಣಿಗೆ ಕಾಲ್ ಮಾಡಬಹುದು...ನಾಳೆ ಜಾಹೀರಾತು ಕೊಡುತ್ತೇವೆ. ಈವತ್ತೇ ಬರೆದು ನೀವು ಬೈ ಲೈನ್ ಪಡೆದುಕೊಳ್ಳಬಹುದು ಅಲ್ಲವಾ... ಎಂದರು.
ಅದೇ ಕಚೇರಿಯಲ್ಲಿ ಧ್ರುತಿ ಕಪಾಡಿಯಾ ಕೃಷ್ಣನ್ ಎಂಬ ಗುಜರಾತ್ ಮೂಲದ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಅವರು ಕಂಪನಿಯ ಮಾರ್ಕೆಟಿಂಗ್ ಕಮ್ಯುನಿಕೇಶನ್ ವಿಭಾಗದಲ್ಲಿ ಡೆಪ್ಯುಟಿ ಮ್ಯಾನೇಜರ್. ಸದಾ ಹಸನ್ಮುಖಿ. ಕಾರ್ಪೊರೇಟ್ ಕಂಪನಿಯಲ್ಲಿ ಕನ್ನಡ ಗೊತ್ತಿದ್ದವರೂ ಮಾತನಾಡುವುದಿಲ್ಲ. ಹೀಗಿರುವಾಗ ಕಪಾಡಿಯಾ ಕನ್ನಡದಲ್ಲಿ ಮಾತನಾಡಿದ್ದು ಖುಷಿಗೆ ಕಾರಣವಾಯಿತು.
No comments:
Post a Comment