ಮೊನ್ನೆ ಪುತ್ತೂರಿಗೆ ಹೋಗಿದ್ದೆ..ಸಮಯ ಸಿಕ್ಕದೆ ಕಿದೂರು, ಕಳತ್ತೂರಿಗೆ ಭೇಟಿ ನೀಡಲು ಆಗಲಿಲ್ಲ.
ಪುತ್ತೂರು ವಿವೇಕಾನಂದ ಕಾಲೇಜು ವಿಸ್ತಾರವಾಗಿ ಬೆಳೆದಿದೆ. ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಎಂಬಿಎ ಅಂತ ಅನೇಕಾನೇಕ ಕೋರ್ಸ್ ಗಳನ್ನು ಕಲಿತುಕೊಳ್ಳಲು ಸಾವಿರಾರು ವಿದ್ಯಾರ್ಥಿಗಳು ರಾಜ್ಯದ ನಾನಾ ಕಡೆಗಳಿಂದ ಬರುತ್ತಾರೆ. ಅವರಿಗೆಲ್ಲ ಊಟ, ಕಾಫಿ, ತಿಂಡಿಯ ವ್ಯವಸ್ಥೆ ಆಗಬೇಕಲ್ಲವೇ ?
ಹೀಗಾಗಿ ಕಾಲೇಜಿನ ಸುತ್ತಲೂ ಅನೇಕ ಮೆಸ್ ಗಳು ಹುಟ್ಟಿಕೊಂಡಿವೆ. ಹತ್ತು ವರುಶಗಳ ಹಿಂದೆ ತೀರಾ ಬಡತನದಲ್ಲಿದ್ದ ಜನ, ಈವಾಗ ಮೆಸ್ ಗಳನ್ನು ಕಟ್ಟಿಕೊಂಡು ಸಂಪಾದಿಸಿದ ದುಡ್ಡಿನಲ್ಲಿಯೇ ಮನೆ, ಬೈಕು ಮಾಡಿಕೊಂಡಿದ್ದಾರೆ. ಅವರಲ್ಲೀಗ ಹಣ ಓಡಾಡುತ್ತಿದೆ. ಈ ಬದಲಾವಣೆಗೆ ವಿವೇಕಾನಂದ ಕಾಲೇಜು ಕಾರಣ ಅಂತ ಅವರೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಅದೇ ಪುತ್ತೂರಿನ ಹಳ್ಳಿಗಳಲ್ಲಿ ಅಡಿಕೆ ಬೆಳೆಗಾರರ ಸ್ಥಿತಿ ಅಂತಹ ಬದಲಾವಣೆ ಕಂಡಿಲ್ಲ. ಬದಲಿಗೆ ಪ್ರತಿಯೊಬ್ಬ ಅಡಿಕೆ ಬೆಳೆಗಾರನೂ ತೀವ್ರ ತೊಂದರೆಯಲ್ಲಿದ್ದಾನೆ. ತನ್ನದೇ ಕೊನೆ, ಮಕ್ಕಳು ಇಂಥ ಸ್ಥಿತಿಗೆ ಬರಬಾರದು ಅಂತ ಭಾವಿಸುತ್ತಾನೆ. ಹಾಗಾದರೆ ಮುಂದೆ ನಿಮ್ಮ ಜಮೀನು ನೋಡಿಕೊಳ್ಳುವವರಾರು ? ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ.
ನಾವಂತೂ ವೃದ್ಧಾಶ್ರಮ ಸೇರಲು ನಿರ್ಧಾರ ಮಾಡಿದ್ದೇವೆ..ಎನ್ನುತ್ತಾರೆ ಅವರು..
ಮುಕ್ತ
5 weeks ago
No comments:
Post a Comment